ಬೆಂಗಳೂರು: ಬಿಗ್‍ಬಾಸ್ ಸೆಲೆಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಮತ್ತು ತಂಡದಿಂದ ಬಾರ್ ಸಪ್ಲೈಯರ್ ನ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟಿಸ್ಟ್ ಸಿಕ್ಕಿದೆ.ಪ್ರಕರಣ ಸಂಬಂಧ ಇದೀಗ ಸಪ್ಲೈಯರ್ ವಿರುದ್ಧವೇ ಆರೋಪ ಕೇಳಿಬಂದಿದೆ. ಸುನಾಮಿ ಕಿಟ್ಟಿ ತನ್ನ ಸ್ನೇಹಿತನ ಹೆಂಡತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ಅಂತ ಸಪ್ಲೈಯರ್ ಮತ್ತು ತೌಶಿಕ್ ಅಪಹರಣ ಮಾಡಿದ್ರು. ಆದ್ರೆ, ಸುನೀಲ್ ಪತ್ನಿ ಈಗ ತನ್ನ ಸ್ನೇಹಿತನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುನೀಲ್ ಪತ್ನಿ, ತೌಶಿಕ್ ಹಾಗೂ ನನ್ನ ನಡುವೆ ಯಾವ ಸಂಬಂಧನೂ ಇಲ್ಲ. ಏನೂ ಇಲ್ಲ. ಜಸ್ಟ್ ಫ್ರೆಂಡ್ಸ್ ಆಗಿದ್ವಿ ಅಷ್ಟೇ. ಅವರು ನನ್ನ ಮೊಬೈಲ್ ನನ್ನು ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ನನ್ನ ಪತಿಗೆ ಕಳುಹಿಸಿದ ಮೆಸೇಜ್ ಗಳನ್ನು ತೌಶಿಕ್ ಪಾರ್ವರ್ಡ್ ಮಾಡಿಕೊಂಡು ನನ್ನ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅದಕ್ಕೆ ಗಿರೀಶ್, ಬ್ಯಾಗ್ರೌಂಡ್ ಚೆನ್ನಾಗಿದೆ. ಹೀಗಾಗಿ ಆಕೆಯನ್ನು ಪ್ರೀತಿ ಮಾಡು ಅಂತ ಸಪೋರ್ಟ್ ಮಾಡುತ್ತಿದ್ದರು. ಕೊನೆಗೆ ನಾನು ನನ್ನ ಪತಿ ಸುನೀಲ್ ಅವರಿಗೆ ಈ ವಿಷಯವನ್ನೆಲ್ಲಾ ಹೇಳಿದೆ. ಬಳಿಕ ಸುನೀಲ್, ತೌಶಿಕ್ ಮತ್ತು ಗಿರೀಶ್ ನನ್ನು ಕರೆಸಿ ನನ್ನ ಮುಂದೆಯೇ ಅವರಿಗೆ ಎರಡೇಟು ಹೊಡೆದ್ರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!ನಾವು ಫ್ರೆಂಡ್ಸ್ ಎಲ್ಲರೂ ಆವಾಗವಾಗ ಸಿಗ್ತಾ ಇದ್ವಿ. ಈ ವೇಳೆ ಒಂದಿನ ನಾನು ಪರ್ಸ್, ಮೊಬೈಲ್ ಎಲ್ಲವನ್ನು ಟೇಬಲ್ ಮೇಲಿಟ್ಟು ರೆಸ್ಟ್ ರೂಮ್ ಗೆ ಹೋಗಿದ್ದೆ. ಆ ಸಮಯದಲ್ಲಿ ನನ್ನ ಮೊಬೈಲ್ ನಲ್ಲಿದ್ದ ಮೆಸೇಜ್ ಗಳನ್ನು ಪಾರ್ವರ್ಡ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಒಳ್ಳೆ ದುಡ್ಡಿದೆ. ಕಾರ್ ಇದೆ ಅಂತ ಬ್ಯಾಗ್ರೌಂಡ್ ನೋಡ್ಕೊಂಡು ದುಡ್ಡು ಮಾಡಕ್ಕೋಗಿ ಈ ತರ ಆಗಿದೆ ಅಂತ ಅಂದ್ರು.ಗಿರೀಶ್ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಗೆಳೆಯನಾಗಿದ್ದ ತೌಶಿಕ್ 20 ದಿವಸಕ್ಕೊಂದು ಬಾರಿ ನನಗೆ ಸಿಗುತ್ತಿದ್ದ. ಈ ವೇಳೆ ಇಬ್ಬರೂ ಅಲ್ಲಿ ಊಟಕ್ಕೆ ಹೋಗ್ತಾ ಇದ್ವಿ. ಅಲ್ಲಿ ತೌಶಿಕ್ ಗೆ ಗಿರೀಶ್ ಪರಿಚಯವಾಗಿದ್ರು. ಹೀಗಾಗಿ ಅವರು ನಮ್ಮಿಬ್ಬರ ಜೊತೆ ಕ್ಲೋಸ್ ಇದ್ರು. ಅಲ್ಲದೇ ನಮ್ಮ ಹುಡುಗನ ಲವ್ ಮಾಡು ಅಂತ ತೊಂದರೆ ಕೊಡುತ್ತಿದ್ದರು. ಇದರಿಂದ ಬೇಸತ್ತ ನಾನು ಈ ಇಬ್ಬರು ಸೇರಿ ನನ್ನ ಜೊತೆ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾರೆಂದು ನನ್ನ ಪತಿಗೆ ಹೇಳಿದೆ ಅಂತ ಅವರು ವಿವರಿಸಿದ್ರು.https://www.youtube.com/watch?v=Yv1-SHePrLwSign in to your account
Username or Email Address


Password

 Remember Me


