ಕೊಪ್ಪಳ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಹಸುವನ್ನು ಯುವಕರು ರಕ್ಷಣೆ ಮಾಡಿದ್ದಾರೆ.ಕೊಪ್ಪಳದ ಗಂಗಾವತಿ ತಾಲೂಕು ಕೇಸರಹಟ್ಟಿ ಗ್ರಾಮದ ಬಳಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ನೀರು ಕುಡಿಯಲು ಬಂದಿದ್ದ ಹಸು ಕಾಲುವೆಗೆ ಬಿದ್ದಿದೆ. ದನಗಾಯಿ ವೆಂಕೋಬಿ ನೋಡನೋಡುತ್ತಿದ್ದಂತೆಯೇ ಹಸು ಸಾಕಷ್ಟು ದೂರ ನೀರಿನಲ್ಲಿ ಕೊಚ್ಚಿ ಹೋಗಿದೆ.ಕೂಡಲೇ ಐದಾರು ಯುವಕರು ಹಿಂದೆ-ಮುಂದೆ ನೋಡದೇ ಕಾಲುವೆಗೆ ಜಿಗಿದು ಹಸುವಿನ ರಕ್ಷಣೆಗೆ ಮುಂದಾಗಿದ್ರು. ಸಾಕಷ್ಟು ಪ್ರಯತ್ನಿಸಿದ್ರೂ, ಹಸುವಿನ ರಕ್ಷಣೆ ಸಾಧ್ಯವಾಗಿರಲಿಲ್ಲ. ಆದ್ರೂ ಬಿಡದೆ ಹಸುವಿನ ರಕ್ಷಣೆ ಮಾಡಲು ಯುವಕರ ತಂಡ ಹರಸಾಹಸ ಪಟ್ಟಿತ್ತು.ಸುಮಾರು 20 ನಿಮಿಷದ ನಂತರ ದನಗಾಹಿ ಸ್ಥಳಕ್ಕೆ ಬಂದು ತಾನೂ ಕಾಲುವೆಗೆ ಜಿಗಿದಾಗ ಹಸು ಅನಾಯಾಸವಾಗಿ ದಡ ಸೇರಿದೆ.https://www.youtube.com/watch?v=eC31TAjukZ8Sign in to your account
Username or Email Address


Password

 Remember Me


