ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಆಯ್ತು, ನಾರಾಯಣಸ್ವಾಮಿ ದಾಂಧಲೆ ಆಯ್ತು, ಈಗ ಬಿಬಿಎಂಪಿ ಜಮೀನಿನಲ್ಲಿ ಸಚಿವ ಲೇಔಟ್ ಕೃಷ್ಣಪ್ಪ ಬಂಟ ಗುರುಲಿಂಗಯ್ಯ ದರ್ಬಾರ್ ಜೋರಾಗಿದೆ.ಕೃಷ್ಣಪ್ಪ ಬೆಂಬಲಿಗನಾಗಿರುವ ಗುರುಲಿಂಗಯ್ಯ, ಕೆಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿರುವ 30 ಗುಂಟೆ ಬಿಬಿಎಂಪಿ ಜಾಗವನ್ನು 30 ವರ್ಷಗಳಿಂದ 2 ಲಕ್ಷಕ್ಕೆ ಬಾಡಿಗೆಗೆ ಕೊಟ್ಟಿದ್ದಾನೆ.2010ರಲ್ಲೇ ಬಿಬಿಎಂಪಿ ತೆರವುಗೊಳಿಸುವಂತೆ ಆದೇಶ ಮಾಡಿತ್ತು. ಈ ಆದೇಶದ ವಿರುದ್ಧ ಗುರುಲಿಂಗಯ್ಯ ಕೋರ್ಟ್ ಮೆಟ್ಟಿಲೇರಿದ್ದ. 2018 ಜನವರಿಯಲ್ಲಿ ಕೋರ್ಟ್ ಗುರುಲಿಂಗಯ್ಯನ ಅರ್ಜಿ ವಜಾ ಮಾಡಿದೆ.ಅರ್ಜಿ ವಜಾ ಆದ ಬಳಿಕ ಕಾರ್ಪೊರೇಟರ್ ಗಾಯಿತ್ರಿ ಗಣೇಶ್, ಬಿಬಿಎಂಪಿ ಅಧಿಕಾರಿಗಳು ತೆರವು ಮಾಡೋಕೆ ಮುಂದಾದ್ರೆ ಅವರ ಮೇಲೆಯೇ ದಬ್ಬಾಳಿಕೆ ಮಾಡಿದ್ದಾನೆ. ಈತ ವಸತಿ ಸಚಿವ ಕೃಷ್ಣಪ್ಪ ಆಪ್ತನಾಗಿರೋದ್ರಿಂದ ಪೊಲೀಸರು ಕಂಡೂ ಕಾಣದಂತೆ ಕುಳಿತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.Sign in to your account
Username or Email Address


Password

 Remember Me


