ಮಂಗಳೂರು: ಕರಾವಳಿಯ ಪ್ರಸಿದ್ಧ ಆರಾಧನೆಗಳಲ್ಲಿ ನಾಗಮಂಡಲ ಕೂಡಾ ಒಂದು. ನಾಗದೋಷ ಪರಿಹಾರಕ್ಕೆ ಅಂತಾನೇ ನಾಗಮಂಡಲ ಆರಾಧನೆ ಮಾಡಲಾಗುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಮಣಿಲ ಶ್ರೀ ಧಮ್ಮ ದೇವಸ್ಥಾನದಲ್ಲಿ ನಾಗಮಂಡಲ ನಡೆಯಿತು. ಬೆಳಗ್ಗೆಯಿದ ಶುರುವಾಗಿ 24 ಗಂಟೆ ಅದ್ಧೂರಿಯಾಗಿ ನಡೆದ ನಾಗಪೂಜೆಗೆ ವೇದಮೂರ್ತಿ ಕಕ್ಕುಂಜೆ ನಾಗನಾಂದ ವಾಸುದೇವ ಆಚಾರ್ಯ, ಕೃಷ್ಣಪ್ರಸಾದ್ ವೈದ್ಯ ಮುಡೂರು ನಾಗಪತ್ರಿಗಳಾಗಿ ಭಾಗವಹಿಸಿದ್ರು.ಬೆಳಗ್ಗೆ ನಾಗಪೂಜೆಯೊಂದಿಗೆ ನಾಗಮಂಡಲ ಆರಂಭವಾಯಿತು. ಮಣಿಲ ದೇವಸ್ಥಾನದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಾಗಮಂಡಲ ನೆರವೇರಿತು. ಇದರಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ರು.Sign in to your account
Username or Email Address


Password

 Remember Me


