ಬಳ್ಳಾರಿ: ಒಂದೂವರೆ ವರ್ಷದ ಹಿಂದೆಯಷ್ಟೇ ರಥೋತ್ಸವದ ವೇಳೆ ರಥದ ಅಚ್ಚು ಮುರಿದು ಕೊಟ್ಟೂರಿನ ಕೊಟ್ಟೂರೇಶ್ವರ ರಥ ಮಗುಚಿ ಬಿದ್ದಿತ್ತು. ಈ ಘಟನೆ ಮಾಸುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ರಥ ರಥೋತ್ಸವದ ವೇಳೆ ಮಗುಚಿ ಬಿದ್ದಿದೆ.ಹೊಸಪೇಟೆ ತಾಲೂಕಿನ ಗರಗ ನಾಗಾಲಾಪುರ ಗ್ರಾಮದ ಆಂಜನೇಯ ರಥೋತ್ಸವದ ವೇಳೆ ರಥ ಮಗುಚಿ ಬಿದ್ದಿದೆ. ರಥೋತ್ಸವ ನಡೆಯುವ ವೇಳೆ ರಥದ ಅಚ್ಚು ಮುರಿದು ರಥ ನೆಲಕ್ಕೆ ಉರುಳಿದೆ.ಘಟನೆಯಲ್ಲಿ ಓರ್ವ ಬಾಲಕನಿಗೆ ಗಾಯವಾಗಿದ್ದು, ಗಾಯಾಳು ಬಾಲಕನನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ರಥ ಬಿಳುವ ಮುನ್ನ ರಥದ ಪಕ್ಕದಲ್ಲಿದ್ದ ಎಲ್ಲರೂ ತಪ್ಪಿಸಿಕೊಂಡ ಪರಿಣಾಮ ಬಹು ದೊಡ್ಡ ಅನಾಹುತ ತಪ್ಪಿದಂತಾಗಿದೆ.https://youtu.be/f0o4C-zVphshttps://www.youtube.com/watch?v=oOGOlAPVqEEhttps://www.youtube.com/watch?v=iwUr8Y0qoQQSign in to your account
Username or Email Address


Password

 Remember Me


