ಬೆಂಗಳೂರು: ಯುಬಿ ಸಿಟಿಯಲ್ಲಿ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿಸ್ ಮಗ ರೌಡಿ ಮೊಹಮ್ಮದ್ ನಲಪಾಡ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇದನ್ನೂ ಓದಿ: Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಜಾಮೀನು ಕೋರಿ ನಲಪಾಡ್ ಅರ್ಜಿ ಸಲ್ಲಿಸಿದ್ದಾನೆ. ಘಟನೆ ನಡೆದು ಹಲವು ಗಂಟೆಗಳ ನಂತರ 307 ಸೆಕ್ಷನ್ ಹಾಕಲಾಗಿದೆ. ಆದ್ರೆ ನಲಪಾಡ್ ಹಲ್ಲೆ ಮಾಡಿದ್ದಾನೆಂದು ಎಫ್‍ಐಆರ್‍ನಲ್ಲಿ ಉಲ್ಲೇಖವಿಲ್ಲ. 10 ರಿಂದ 15 ಜನ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ಹಾಗಾಗಿ ಮೇಲಿನ ಅಂಶಗಳನ್ನು ಪರಿಗಣಿಸಿ ಜಾಮೀನು ನೀಡಿ ಅಂತ ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!ಇನ್ನೊಂದು ಕಡೆ ನಲಪಾಡ್‍ನ ಪೋಲೀಸ್ ಕಸ್ಟಡಿ ಅಂತ್ಯವಾಗಿರೋ ಹಿನ್ನಲೆಯಲ್ಲಿ ಇನ್ನು 4 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡೋ ಸಾಧ್ಯತೆಯೂ ಇದೆ. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!ಮಂಗಳವಾರ ರಾತ್ರಿ 10 ಗಂಟೆವರೆಗೂ ನಲಪಾಡ್ ವಿಚಾರಣೆ ನಡೆದಿದೆ. ವಿಚಾರಣೆ ನಂತರ ಎಂಪೈರ್ ಹೋಟೆಲ್‍ನಿಂದ ನಲಪಾಡ್‍ಗೆ ಬಿರಿಯಾನಿ ಪಾರ್ಸೆಲ್ ತರಿಸಿಕೊಡಲಾಗಿದೆ. ಸಹಚರರು ಮಲಗಿದ್ರೂ ರೌಡಿ ನಲಪಾಡ್‍ಗೆ ಮಾತ್ರ ನಿದ್ದೆ ಬಂದಿರಲಿಲ್ಲ. ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಸದಲ್ಲಿರೋ ರೌಡಿ ನಲಪಾಡ್, ಕಂಬಿ ಎಣಿಸುತ್ತಿದ್ರೂ ಕಿಂಚಿತ್ತು ಪಾಪ ಪ್ರಜ್ಞೆಯಿಲ್ಲದೇ ನಗು ಮುಖದಲ್ಲೇ ಕಾಲ ಕಳೆದಿದ್ದಾನೆ. ರಾತ್ರಿ ಎರಡು ಗಂಟೆವರೆಗೂ ನಲಪಾಡ್ ಎಚ್ಚರವಾಗಿಯೇ ಇದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!ಹ್ಯಾರಿಸ್ ಪುತ್ರ ನಲಪಾಡ್‍ನಿಂದ ಹಲ್ಲೆಗೊಳಗಾಗಿರುವ ವಿದ್ವತ್‍ಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಗರದ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯರನ್ನು ಕರೆಸಿ ಇಂದು ಚಿಕಿತ್ಸೆ ನಡೆಸುವ ಸಾಧ್ಯತೆಯಿದೆ. ನರರೋಗ ತಜ್ಞರನ್ನು ಕರಸಿ ವಿದ್ವತ್‍ಗೆ ಪರೀಕ್ಷೆ ನಡೆಸಲಾಗುತ್ತದೆ. ವಿದ್ವತ್ ಅವರ ಮುಖದ ಊತ ಸದ್ಯ ಕಡಿಮೆಯಾಗಿದೆ. ಅದ್ರೆ ವಿದ್ವತ್ ದೇಹದ ಒಂಭತ್ತು ಮೂಳೆ ಮುರಿತಕ್ಕೊಳಗಾಗಿದೆ. ವಿದ್ವತ್‍ಗೆ ದ್ರವ ಆಹಾರ ಮಾತ್ರ ನೀಡಲಾಗುತ್ತಿದೆ. ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆhttps://www.youtube.com/watch?v=IHwUP3mtZXQhttps://www.youtube.com/watch?v=dy5Sl50Qi3k Sign in to your account
Username or Email Address


Password

 Remember Me


