ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ತಿರುಗೇಟು ನೀಡಿದೆ.ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಿದ ಅನುದಾನವೆಷ್ಟು? ಅದರಲ್ಲಿ ಬಳಕೆಯಾಗಿರೋ ಹಣವೆಷ್ಟು ಎಂಬ ಮಾಹಿತಿಯನ್ನ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.2013-14ರಲ್ಲಿ 150 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ ಒಂದು ರೂಪಾಯಿಯೂ ಖರ್ಚು ಮಾಡಿಲ್ಲ. ನಿಗದಿಪಡಿಸಲಾದ ಅನುದಾನದಲ್ಲಿ ಕೇವಲ 20% ಅನುದಾನ ಬಿಡುಗಡೆಯಾಗಿದೆ. ಹಾಗೇ 2014-15ರಲ್ಲಿ 600 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ 123.35 ರೂ. ಖರ್ಚಾಗಿದೆ. 40% ಯೋಜನೆಗಳು ಇನ್ನೂ ಅಪೂರ್ಣವಾಗಿದೆ.2015-16ರಲ್ಲಿ 1000 ಕೋಟಿ ರೂ. ನಿಗದಿಯಾಗಿದ್ದು 389 ಕೋಟಿ ರೂ. ಖರ್ಚು ಮಾಡಲಾಗಿದೆ. ಕೇವಲ 35% ಕೆಲಸ ಮಾತ್ರ ಮುಗಿದಿದೆ. 2016-17ರಲ್ಲಿ 1000 ಕೋಟಿ ನಿಗದಿಯಾಗಿದ್ದು, 622 ಕೋಟಿ ರೂ. ಖರ್ಚಾಗಿದೆ. 2727 ಯೋಜನೆಗಳಲ್ಲಿ 12 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ. ಖರ್ಗೆ ಬೆಳೆದಿದ್ದಾರೆ ಆದ್ರೆ ಪ್ರದೇಶ ಮಾತ್ರ ಇನ್ನೂ ಹಿಂದುಳಿದಿದೆ ಎಂದು ಬಿಜೆಪಿ ಹೇಳಿದೆ. ಇದನ್ನೂ ಓದಿ: ನಾವು ದೇಶ ಮಾರಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನ ನೀಡಿದ್ದು ಅದನ್ನ ಅಭಿವೃದ್ಧಿಪಡಿಸಲು, ಹಿಂದಕ್ಕೆಳೆಯುವ ಸಲುವಾಗಿ ಅಲ್ಲ. ಅನುದಾನಗಳಿಂದ ಕಾಂಗ್ರೆಸ್ ನಾಯಕರು ಮಾತ್ರ ಲಾಭ ಪಡೆದಿದ್ದಾರೆ. ರಾಹುಲ್ ಗಾಂಧಿ ಸುಮ್ಮನೆ ಏನೇನೋ ಮಾತನಾಡೋ ಬದಲು ಇದಕ್ಕೆ ಉತ್ತರಿಸಲಿ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ದೇಶಕ್ಕೆ ಏನು ಮಾಡದೇ ಹೋಗಿದ್ರೆ ಇಷ್ಟು ಪ್ರಗತಿ ಆಗ್ತಿತ್ತಾ: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆThe object of granting special status to Hyd-Karnataka region was to develop it and pull it out of backwardness. However, only regional Congress 'Netas' have been benefitted from the grants. Will @OfficeOfRG take stock instead of just blabbering nonsense? #RahulMustAnswer pic.twitter.com/BTf1Ho1oHJ— BJP Karnataka (@BJP4Karnataka) February 13, 2018Sign in to your account
Username or Email Address


Password

 Remember Me


