ಮಂಡ್ಯ: ಸರ್ಕಾರ ಕೊಟ್ಟ ಇಂಜೆಕ್ಷನ್ ಗೆ ಇಬ್ಬರು ಮಕ್ಕಳು ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಇದರಿಂದ ಪೋಷಕರು ಆಕ್ರೋಶಗೊಂಡು ಆಸ್ಪತ್ರೆ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿರುವಸರ್ಕಾರದಿಂದ ನೀಡಿದ ಪೆಂಟಾವೇಲೆಂಟ್ ಇಂಜೆಕ್ಷನ್ ಪಡೆದು ಹಸುಗೂಸುಗಳು ಸಾಯುತ್ತಿವೆ. ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ಗುರುವಾರ ಅಂಗನವಾಡಿಯಲ್ಲಿ ಒಂಭತ್ತು ಮಕ್ಕಳಿಗೆ ಇಂಜೆಕ್ಷನ್ ಕೊಡಿಸಲಾಗಿತ್ತು. ಆದರೆ ಇಂಜೆಕ್ಷನ್ ಕೊಡಿಸಿದ ನಂತರ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿವೆ. ಪೆಂಟಾವೇಲೆಂಟ್ ಚುಚ್ಚುಮದ್ದನ್ನು 5 ವರ್ಷಕ್ಕಿಂತ ಕೆಳಗಿನ ಹಸೂಗೂಸುಗಳಿಗೆ ಸರ್ಕಾರ ನೀಡುತ್ತದೆ.ಇಂಜೆಕ್ಷನ್ ಪಡೆದ ಒಂಭತ್ತು ಮಕ್ಕಳಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಉಳಿದ ಏಳು ಮಕ್ಕಳು ಅಸ್ವಸ್ಥರಾಗಿದ್ದಾರೆ. ಏಳು ಮಕ್ಕಳಲ್ಲಿ ಮೂರು ಮಕ್ಕಳ ಸ್ಥತಿ ಗಂಭೀರವಾಗಿದ್ದು, ಇದರಿಂದ ತಾಯಂದಿರು ಹಾಗೂ ಇಡೀ ಗ್ರಾಮವೇ ಆತಂಕ ಪಡುತ್ತಿದೆ. ಆದರೆ ಈ ಬಗ್ಗೆ ವೈದ್ಯರಿಗೆ ತಿಳಿಸಿದರೆ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.ಹೇಮಾವತಿ ಮತ್ತು ರವಿ ದಂಪತಿಯ ಒಂದು ಮಗು ಮತ್ತು ಪ್ರಿಯಾಂಕ ಮತ್ತು ರವಿ ದಂಪತಿಯ ಮಗು ಸಾವನ್ನಪ್ಪಿವೆ. ಮೊದಲನೇ ಡೋಸ್ ಪಡೆದ ಮಕ್ಕಳು ಮೃತಪಟ್ಟಿವೆ. ಸತ್ತಿರುವ ಎರಡು ಮಕ್ಕಳು ಗಂಡು ಮಕ್ಕಳಾಗಿದ್ದು, ವೈದ್ಯರ ಬಳಿ ಸಮಸ್ಯೆ ಹೇಳಿದಾಗಲೇ ಚಿಕಿತ್ಸೆ ನೀಡಿದ್ದರೆ ಮಕ್ಕಳ ಸಾವನ್ನು ತಪ್ಪಿಸಬಹುದಿತ್ತು ಎಂದು ಪೋಷಕರು ಆಸ್ಪತ್ರೆಯ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


