ಬಳ್ಳಾರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಹು ಗ್ರಹವಿದ್ದಂತೆ. ಸಿಎಂ ಸಿದ್ದರಾಮಯ್ಯಗೆ ಜೈಲಿಗೆ ಹೋಗಿ ಬಂದವರೇ ಬೇಕು. ಕಾಂಗ್ರೆಸ್ ಪಕ್ಷದಲ್ಲೀಗ ಮಾತನಾಡಲು ಯಾವ ನಾಯಕರಿಗೂ ನೈತಿಕತೆಯಿಲ್ಲ ಎಂದು ಸಂಸದ ಬಿ ರಾಮುಲು ಹೇಳಿದ್ದಾರೆ.ಕಳೆದ ರಾತ್ರಿ ಬಳ್ಳಾರಿಯ ಶ್ರೀರಾಂಪುರ ಕಾಲೋನಿಯ ಸ್ಲಂ ನಿವಾಸಿಯಾದ ಮಾಯಮ್ಮ ಎಂಬವರ ಮನೆಯಲ್ಲಿ ಸ್ಲಂ ಸಮಸ್ಯೆ ಅರಿಯಲು ವಾಸ್ತವ್ಯ ಮಾಡಿದ  ಶ್ರೀರಾಮುಲು ಹಾಗೂ ಮಾಜಿ ಶಾಸಕ ಸೋಮಶೇಖರರೆಡ್ಡಿ ರಾಹುಲ್ ಹಾಗೂ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.ಸ್ಲಂ ನಿವಾಸಿಗಳಿಗೆ ಕಾಂಗ್ರೆಸ್ ಸರ್ಕಾರ ಏನೂ ವ್ಯವಸ್ಥೆ ಮಾಡಿಲ್ಲ. ಬದಲಾಗಿ ಬರೀ ಕಾಲಹರಣ ಮಾಡಿದ್ರೂ, ಬಿಜೆಪಿ ಸ್ಲಂ ಜನರಿಗೆ ಸಾಕಷ್ಟು ಆಶ್ರಯ ವ್ಯವಸ್ಥೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅಕ್ರಮ ಗಣಿಗಾರಿಕೆ ವಿರುದ್ಧ ಬೊಬ್ಬಿರಿದ್ರೂ ಪಾದಯಾತ್ರೆ ಮಾಡಿದ ವೇಳೆ ಮಾಡಿದ ಭಾಷಣ ಮರೆತುಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇದೀಗ ನೈತಿಕತೆಯೇ ಇಲ್ಲದಾಗಿದೆ ಎಂದರು.Sign in to your account
Username or Email Address


Password

 Remember Me


