ಬೆಳಗಾವಿ: ಚಿಕ್ಕೋಡಿ ಸಬ್ ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.ಪರಾರಿಯಾಗಿದ್ದ ಕೈದಿ ಅಶೋಕ್ ಭೋಸಲೆ(40) ಯನ್ನು ಐಗಳಿ ಠಾಣೆ ಪೊಲೀಸರು ಕೋಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. 2017ರ ಆಗಸ್ಟ್ 26ರಂದು ಚಿಕ್ಕೋಡಿ ಸಬ್ ಜೈಲಿನ ಗೋಡೆಗೆ ಕನ್ನ ಕೊರೆದು 3 ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದರು.ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಆಗಸ್ಟ್ 27 ರಂದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನಿತಿನ್ ಜಾಧವ್ ಎಂಬ ಕೈದಿಯನ್ನು ಬಂಧಿಸಲಾಗಿತ್ತು. ಇದೀಗ ಅಶೋಕ್ ಭೋಸಲೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪರಾರಿಯಾಗಿರುವ ಇನ್ನೋರ್ವ ಆರೋಪಿ ಶರದ್ ಪವಾದ್ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.Sign in to your account
Username or Email Address


Password

 Remember Me


