ಕಾರವಾರ: ಬಿಗ್ ಬಾಸ್-5 ಗೆದ್ದ ನಂತರ ರ‍್ಯಾಪರ್ ಚಂದನ್ ಶೆಟ್ಟಿ ಎಲ್ಲರ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ದಿವಕರ್ ಬಿಟ್ಟರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಜೊತೆ ಹೆಚ್ಚು ಸಲುಗೆಯಿಂದ ಇದ್ದರು. ಇವರ ಸ್ನೇಹ ನೋಡಿ ಎಲ್ಲರೂ ಖುಷಿಪಡುತ್ತಿದ್ದರು.ಈಗ ಬಿಗ್ ಬಾಸ್ ಮನೆಯಿಂದ ಹೊರಬಂದರೂ ಚಂದನ್ ಹಾಗೂ ನಿವೇದಿತಾ ತಮ್ಮ ಸ್ನೇಹವನ್ನು ಮುಂದುವರೆಸುಕೊಂಡು ಹೋಗುತ್ತಿದ್ದು, ಇತ್ತೀಚಿಗೆ ಕುಮುಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದನ್ ವೇದಿಕೆ ಮೇಲೆ ಎಲ್ಲರ ಸಮ್ಮುಖದಲ್ಲಿ ನಿವೇದಿತಾಗೆ ಫೋನ್ ಮಾಡಿ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ನಂತರ ಮೊದಲ ಬಾರಿ ತವರೂರಿಗೆ ಭೇಟಿ ನೀಡಿದ ಚಂದನ್ ಶೆಟ್ಟಿಬಿಗ್ ಬಾಸ್ ಮನೆಯಲ್ಲಿ ಆಕೆ ಯಾವಾಗಲೂ ಚಂದನ್, ಚಂದನ್ ಎಂದು ಕರೆದು ನನ್ನನ್ನು ಆ್ಯಕ್ಟೀವ್ ಆಗಿ ಇರುವಂತೆ ಮಾಡಿದ್ದಳು. ಏನಾದರೂ ಮಾಡೋಣ ಎಂದು ಹೇಳಿತ್ತಿದ್ದಳು. ಆ ಸಮಯದಲ್ಲೇ ನಾನು ಬಿಗ್ ಬಾಸ್ ಮನೆಯಲ್ಲಿ 40ಕ್ಕೂ ಹೆಚ್ಚು ಹಾಡುಗಳನ್ನು ಮಾಡುವ ಹಾಗೇ ಮಾಡಿದ್ದಳು ಎಂದು ಚಂದನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಜವಾಗ್ಲೂ ವೈಷ್ಣವಿನ ಚಂದನ್ ಶೆಟ್ಟಿ ಮದುವೆ ಆಗ್ತಾರಾ?- ಬಿಗ್ ಬಾಸ್ ವಿನ್ನರ್ ಹೇಳಿದ್ದು ಹೀಗೆ!ನಿವೇದಿತಾ ಗೌಡರನ್ನು ಚಂದನ್ ಫೋನ್ ಮಾಡಿ,”ನಾನು ಈಗ ಕುಮುಟಾದಲ್ಲಿದ್ದೇನೆ ಹಾಗೂ ನನ್ನ ಮುಂದೆ 60 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ನೀನು ಮಾತನಾಡುತ್ತಿರುವುದು ಎಲ್ಲರೂ ಕೇಳಿಸಿಕೊಳ್ಳುತ್ತಿದ್ದಾರೆ. ಕುಮುಟಾ ಜನತೆಗೆ ಏನಾದರೂ ತಿಳಿಸುತ್ತೀಯಾ” ಎಂದು ಚಂದನ್ ಕೇಳಿದ್ದಕ್ಕೆ,”ನೀವು ಚಂದನ್ ಶೋ ತುಂಬಾ ಎಂಜಾಯ್ ಮಾಡುತ್ತಿದ್ದೀರ ಎಂದು ನನಗೆ ಗೊತ್ತು. ಚಂದನ್ ಎಂದು ಅವನಿಗೆ ಪ್ರೋತ್ಸಾಹ ನೀಡಿ” ಎಂದು ನಿವೇದಿತಾ ಹೇಳಿದರು. ಇದನ್ನೂ ಓದಿ: ಬಿಗ್ ಬಾಸ್ ಹಣದಲ್ಲಿ ದಿವಾಕರ್ ಗೂ ಕೊಡ್ಬೇಕಿತ್ತು ಅಂದವ್ರಿಗೆ ಚಂದನ್ ನೀಡಿದ ಚೆಂದದ ಉತ್ತರ!ಅದೇ ಕಾರ್ಯಕ್ರಮದಲ್ಲಿ ಚಂದನ್ ತನ್ನ ಆತ್ಮೀಯ ಗೆಳೆಯ ದಿವಾಕರ್ ಅವರಿಗೂ ಫೋನ್ ಮಾಡಿ ಕುಮುಟಾದಲ್ಲಿರುವ ವಿಷಯವನ್ನು ತಿಳಿಸಿದ್ದರು. ಅಷ್ಟೇ ಅಲ್ಲದೇ ಅವರ ಜೊತೆ ಸ್ವಲ್ಪ ಖುಷಿಯಾಗಿ ಮಾತನಾಡಿದರು. ಇನ್ನೂ ದಿವಾಕರ್ ಕೂಡ ಚಂದನ್ ಅವರ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸಿದ್ದರು. ಇದನ್ನೂ ಓದಿ: ಆತ್ಮೀಯ ಗೆಳೆಯ ದಿವಾಕರ್ ಗೆ ಸಿಹಿ ಸುದ್ದಿ ನೀಡಿದ ಚಂದನ್ ಶೆಟ್ಟಿhttps://www.youtube.com/watch?v=gOV8LFvmXsISign in to your account
Username or Email Address


Password

 Remember Me


