ಮಂಗಳೂರು: ಮಡಿಕೇರಿ-ಸುಳ್ಯ ಗಡಿಭಾಗದಲ್ಲಿ ನಕ್ಸಲರು ಓಡಾಡುತ್ತಿದ್ದು, ಸಂಪಾಜೆಯ ಕೊಯಿನಾಡಿನ ಗ್ರಾಮದ ಗುಡುಗದ್ದೆಯ ಮನೆಗೆ ಭೇಟಿ ನೀಡಿದ್ದಾರೆ.ಶುಕ್ರವಾರ ದಯಾನಂದ ಎಂಬುವವರ ಮನೆಗೆ ಬಂದ ಮೂವರು ನಕ್ಸಲರು, ಅಡುಗೆ ಪದಾರ್ಥಗಳನ್ನು ಪಡೆದು ಕಾಡಿಗೆ ವಾಪಸ್ಸಾಗಿದ್ದಾರೆ. ಸ್ಥಳೀಯರು ಸಂಪಾಜೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಎನ್‍ಎಫ್ ತಂಡದಿಂದ ಕೂಬಿಂಗ್ ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ.ಜನವರಿ 16ರಂದು ಉಪ್ಪಿನಂಗಡಿ ಸಮೀಪದ ಶಿರಾಡಿ ಮಿತ್ತಬೈಲಿನಲ್ಲಿ ಮೂವರು ನಕ್ಸಲರು ಎರಡು ಮನೆಗಳಿಗೆ ಭೇಟಿ ನೀಡಿದ್ದರು. ಬಳಿಕ ಎಎನ್‍ಎಫ್‍ನಿಂದ ಶೋಧ ಕಾರ್ಯಾಚರಣೆಯೂ ನಡೆದಿತ್ತು. ಆದರೆ ನಕ್ಸಲರು ಪತ್ತೆಯಾಗಿರಲಿಲ್ಲ. ಇದನ್ನೂ ಓದಿ:ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕSign in to your account
Username or Email Address


Password

 Remember Me


