ಕೊಪ್ಪಳ: ಸೆಕ್ಸ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ತಾನು ಹೊಂದಿದ್ದ ಪರಸ್ತ್ರಿ ಸಂಗದ ಬಗ್ಗೆ ಒಪ್ಪಿಕೊಂಡಿದ್ದಾನೆ.ನಾನವನಲ್ಲ ನಾನವನಲ್ಲ ಅಂತಿದ್ದ ಸ್ವಾಮೀಜಿ ಇದೀಗ ನಾನು ಅವಳ ಜೊತೆ ಸಂಬಂಧ ಹೊಂದಿದ್ದೇನೆ ಏನ್ ಮಾಡ್ತಿಯಾ ಮಾಡ್ಕೋ ಹೋಗು ಎಂದು ತನ್ನ ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. ಇನ್ನು ಈ ಕಾಮಿಸ್ವಾಮಿ ಬಾಯಿಬಿಟ್ಟರೆ ಬರೀ ಅಸಭ್ಯ ಭಾಷೆಯನ್ನೇ ಮಾತನಾಡಿದ್ದಾನೆ.ಕೊಟ್ಟೂರು ಸ್ವಾಮೀಜಿ ಮತ್ತು ಕಾರು ಚಾಲಕ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.ಸ್ವಾಮಿ : ನನ್ನ ಜೊತೆ ಅನುಸರಿಸಿಲ್ಲ ಅಂದ್ರೆ, ನನಗೆ ಬೇಡವಾದ ಮೇಲೆ ಏನಕ್ಕೆ ಬೇಕೋ…
ವ್ಯಕ್ತಿ : ಇಷ್ಟು ವರ್ಷ ನಾನು ಬೇಕಾಗಿತ್ತು ಈಗ ಬೇಡವಾದನಾ…. ಏತಕ್ಕಾಗಿ ಬೇಡ ಅಂತಿದ್ದೀರಾ… ನನ್ನಿಂದ ಎಲ್ಲಾ ರೀತಿ ಲಾಭ ಪಡೆದು ಈಗ ಬೇಡ ಅಲ್ವಾ…..
ಸ್ವಾಮಿ : ಅದು ನಿನಗೆ ಗೊತ್ತಿದೆ. ನನಗೂ ಗೊತ್ತಿದೆ. ನಿನ್ನದು  ಹೊಲಸು ಬಾಯಿ
ವ್ಯಕ್ತಿ : ನೀನು ಮಾಡಿದ್ದನೆಲ್ಲಾ. ನೋಡಿ ಕಣ್ಮುಚ್ಚಿ ಕೂತಿದ್ದೆ ನಾನು. ಅದಕ್ಕೆ ನಾನು ಈಗ ಬೇಡವಾದೆ ಅಲ್ವಾ.
ಸ್ವಾಮಿ : ನಾನು ಹೆಂಗಸರಿಗೆ ತಾನೇ ಮಾಡಿದ್ದೀನಿ. ಹೆಂಗಸರನ್ನ ಬಿಟ್ಟು ಬೇರೆಯವರಿಗೆ ಮಾಡಿದ್ದೀನಾ ಹೇಳು. ಇಲ್ಲ ಯಾರದಾದ್ರೂ ಆಸ್ತಿ ತಿಂದಿದ್ದೀನಾ ಹೇಳು. ನಾನು ಹೆಂಗಸರಿಗೆ ಮಾಡಿದ್ದೇನೆ, ಅದಕ್ಕಿಂತ ಹೆಚ್ಚಾಗಿ ಏನ್ ಆಡಿದ್ದೇನೆ ಬೋ.. ಮಗನೆ. ಬದ್ಮಾಶ್ ಸೂ.. ಮಗನೆ. ಹೆಂಗಸರನ್ನ ತಂದು ಇಟ್ಟುಕೊಂಡು ಕೂತಿರುವ ಬೋಳಿ ಮಗ. ನಾನ್ ಹೆಂಗಸರಿಗೆ ಮಾಡಿದ್ದೀನಿ ಯಾರಿಗೆ ಹೇಳಿಕೊಳ್ಳುತ್ತಿಯಾ ಹೇಳು ಹೋಗು. ನಿನ್ನ ಕೈಯಲ್ಲಿ ಏನ್ ಮಾಡಿಕೊಳ್ಳಲು ಆಗುತ್ತೋ ಮಾಡಿಕೋ ಹೋಗು. ನಾನು ಎಲ್ಲದಕ್ಕೂ ರೆಡಿ ಇದ್ದೀನಿ.
ವ್ಯಕ್ತಿ : ಹಾಗೇನಾದ್ರೂ ಮಾಡಬೇಕು ಅಂತ ಅನಿಸಿದ್ರೆ ನಾನು ಮಾಡುತ್ತಿದ್ದೆ.
ಸ್ವಾಮಿ : ಯಾರು ನಿನ್ನ ಬಾಯಿಗೆ ಬತ್ತಿ ಇಟ್ಟೋರು ಅಷ್ಟೊಂದು ಮಾತಾಡತೀಯಾ.ಕಲ್ಮಠ ಸ್ವಾಮಿ ಕಾಮ ಪುರಾಣ ಬಯಲಿಗೆಳೆದ ಕಾರು ಚಾಲಕನಿಗೆ ಜೀವಬೆದರಿಕೆ ಕೂಡ ಹಾಕಲಾಗಿತ್ತು. ಸ್ವಾಮೀಜಿ ಆಪ್ತರಾದ ಶರಣಪ್ಪ ಹುನಗುಂದ, ಶರಣಪ್ಪ ಹೊಸೂರು, ನಾಗರಾಜ್, ಶಿವಾನಂದ ಹಾಗೂ ಗುರುಪಾದಯ್ಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಮನೆಗೆ ನುಗ್ಗಿ ಕಲ್ಮಠ ಸ್ವಾಮೀಜಿ ವಿರುದ್ಧ ಕೊಟ್ಟಿರೋ ದೂರು ಹಿಂತೆಗೆದುಕೊಳ್ಳುವಂತೆ ಜೀವಬೆದರಿಕೆ ಹಾಕಿದ್ದು ಅಲ್ಲದೇ ಅವಾಚ್ಯ ಪದದಿಂದ ಬೈದು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಮಲ್ಲಯ್ಯಸ್ವಾಮಿ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 143, 147, 323, 504, 506, ಹಾಗೂ 149 ರಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇನ್ನೊಂದೆಡೆ ಸ್ವಾಮೀಜಿ ವಿರುದ್ಧ ಪ್ರತಿಭಟನೆ ಮಾಡ್ತಿರೋ ಹೋರಾಟಗಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಅನ್ನುವ ಆರೋಪ ಕೇಳಿಬಂದಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಹಾಬಳೇಶ ಹಾಸಿನಾಳರಿಗೆ ಹಣದ ಆಮಿಷವೊಡ್ಡಿದ್ದಾರೆ ಅಂತ ಬಹಿರಂಗಪಡಿಸಿದ್ದಾರೆ. ಸ್ವಾಮೀಜಿಯ ವಿರುದ್ಧ ಗಂಗಾವತಿಯ ವೀರಶೈವ ಮುಖಂಡರು ಕಲ್ಮಠಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನು ನಡೆಸಿದ್ದರು.ಕಲ್ಮಠದ ಕೊಟ್ಟೂರು ಸ್ವಾಮಿಯ ರಾಸಲೀಲೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಮಠದಿಂದ ಕಾಲ್ಕಿತ್ತಿದ್ದ ಕೊಟ್ಟೂರು ಸ್ವಾಮಿ ಆನಂತರ ಸ್ಥಳೀಯ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರನ್ನ ಕರೆದುಕೊಂಡು ಮಠವನ್ನು ಪ್ರವೇಶ ಮಾಡಿದ್ದರು. ಇದೀಗ ಆಕ್ರೋಶಗೊಂಡ ವೀರಶೈವ ಸಮಾಜ ನಮ್ಮ ಸಮಾಜದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಹಸ್ತಕ್ಷೇಪ ಮಾಡಿರೋದು ಖಂಡನೀಯ ಒಬ್ಬ ಕಳ್ಳ ಕಾಮಿಸ್ವಾಮಿಯ ಬೆಂಬಲಕ್ಕೆ ನಿಂತಿರೋ ಶಾಸಕರು ತಮ್ಮ ಯೋಗ್ಯತೆ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಕೊಟ್ಟೂರು ಸ್ವಾಮಿಯ ಕಾಮಪುರಾಣ ಇಡೀ ದೇಶವೇ ನೋಡಿದೆ ಇಂತಹ ಸ್ವಾಮಿಜಿಯಿಂದ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಯಾವುದೇ ಕಾರಣಕ್ಕೂ ಸ್ವಾಮಿ ಮಠದಲ್ಲಿ ಇರುವುದಕ್ಕೆ ಅವಕಾಶವಿಲ್ಲಾ ಕಳಂಕಿತರು ಈ ಕೂಡಲೇ ಪೀಠ ತ್ಯಾಗ ಮಾಡಿ ಮಠ ಬಿಟ್ಟು ಹೋಗಲೇಬೇಕು ಎಂದು ವೀರಶೈವ ಸಮಾಜ ಮತ್ತು ಗಂಗಾವತಿ ನಾಗರಿಕರು ವಿರುದ್ಧ ಆಗ್ರಹಿಸಿದ್ದರು.https://www.youtube.com/watch?v=A8BjfkuWaLohttps://www.youtube.com/watch?v=utpp_AldyJwhttps://www.youtube.com/watch?v=rhJalJHq9KMhttps://www.youtube.com/watch?v=FVSC0QaAIt8Sign in to your account
Username or Email Address


Password

 Remember Me


