ಮೈಸೂರು: ಮೈಸೂರಿನ ವಿಜಯನಗರದ ಎರಡನೇ ಹಂತದ ಮುಖ್ಯ ರಸ್ತೆಯಲ್ಲಿ 10 ಕ್ಕೂ ಹೆಚ್ಚು ತಲೆ ಬುರುಡೆಗಳು ಪ್ರತ್ಯಕ್ಷವಾಗಿವೆ. ಇದರಿಂದ ನಗರದ ಜನರು ಭಯಗೊಂಡಿದ್ದಾರೆ.ರಸ್ತೆ ಬದಿ ಕಸ ಹಾಕುವ ಜಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ತಲೆ ಬುರುಡೆಗಳನ್ನು ಇಲ್ಲಿ ಎಸೆಯಲಾಗಿದೆ. ಮಾಟ ಮಂತ್ರಕ್ಕಾಗಿ ಹೀಗೆ ಯಾರೋ ತಲೆ ಬುರುಡೆ ತಂದು ನಂತರ ಅವುಗಳನ್ನು ಹೀಗೆ ಬಿಸಾಕಿರುವ ಸಾಧ್ಯತೆ ಇದೆ. ತಲೆ ಬುರುಡೆಗಳನ್ನು ಕಂಡ ಸ್ಥಳೀಯರು ಒಂದು ಕಡೆ ಕುತೂಹಲದಿಂದ ಅವುಗಳನ್ನು ವೀಕ್ಷಿಸುತ್ತಿದ್ದಾರೆ.ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳೀಯರಿಂದ ಮಾಹಿತಿ ತಿಳಿದ ವಿಜಯನಗರ ಪೊಲೀಸರು ಸ್ಥಳಕ್ಕೆ ಬಂದು ಬುರುಡೆಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.https://www.youtube.com/watch?v=cuC4suhTGI4Sign in to your account
Username or Email Address


Password

 Remember Me


