ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡಕ್ಕೆ ಮತ್ತೊಂದು ತಲೆ ನೋವು ಎದುರಾಗಿದೆ. ಗೌರಿ ಹತ್ಯೆಯಾದ ಜಾಗದಲ್ಲಿ ಸಿಕ್ಕ ಕಾಟ್ರಿಜ್‍ಗಳ ಪರೀಕ್ಷೆ ನಡೆಸಿರುವ ಮೂರು ಪ್ರಯೋಗಾಲಯಗಳು ಮೂರು ವಿಭಿನ್ನ ವರದಿ ನೀಡಿವೆ.ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಅಂತೇ ಗೌರಿ ಲಂಕೇಶ್ ಹತ್ಯೆಗೆ ಸಾಮ್ಯತೆ ಇಲ್ಲ ಅಂತಾ ವರದಿ ಒಪ್ಪಿಸಿವೆ ಎಂದು ತಿಳಿದು ಬಂದಿದೆ. ಆದ್ರೆ 7.55 ಎಂಎಂ ಕಂಟ್ರಿಮೇಡ್ ಪಿಸ್ತೂಲ್‍ನಿಂದ ಫೈರ್ ಆಗಿರೋದನ್ನ ಖಚಿತಪಡಿಸಿವೆ. ಇತ್ತ ಹಂತಕರನ್ನ ಆದಷ್ಟು ಬೇಗನೇ ಅರೆಸ್ಟ್ ಮಾಡ್ತೇವೆ ಅಂತ ಸಾಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದು, ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.https://www.youtube.com/watch?v=gMCRfdWRT8whttps://www.youtube.com/watch?v=Wm2_FgKUvtAhttps://www.youtube.com/watch?v=E47pvUQ887Ahttps://www.youtube.com/watch?v=h54A6zdpI3Ahttps://www.youtube.com/watch?v=d5V8Pu3eGnMhttps://www.youtube.com/watch?v=CZ76KMF2i74Sign in to your account
Username or Email Address


Password

 Remember Me


