ಬೆಂಗಳೂರು: ಪಬ್ಲಿಕ್ ಟಿವಿ ನಡೆಸಿದ್ದ ಚುನಾವಣಾ ಪೂರ್ವ ಮೆಗಾಸರ್ವೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಸರ್ವೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಸರ್ವೆಯಿಂದ ರಾಜಕೀಯ ಪಕ್ಷಗಳಲ್ಲಿ ತಳಮಳ, ಹೊಸ ಲೆಕ್ಕಾಚಾರ ಮೂಡಿಸಿತ್ತು. ಮೆಗಾ ಸರ್ವೆಯ ವರದಿ ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೈ ಸೇರಿದೆ.ಸಮೀಕ್ಷೆಯನ್ನ ನೋಡಿ ಆತಂಕಗೊಂಡಿರುವ ಅಮಿತ್ ಶಾ, ತಮ್ಮ ಮಿಷನ್ 150ಗಾಗಿ ಇನ್ನು 35 ರಿಂದ 40 ಸೀಟು ಕೊರತೆ ಇದೆ ಅನ್ನೋದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ಸಮೀಕ್ಷೆಯ ವರದಿಯ ಪೂರ್ಣ ಅಧ್ಯಯನ ಮಾಡುವಂತೆ ತಮ್ಮ `ವಾರ್ ಟೀಂ’ಗೆ ಸೂಚಿಸಿದ್ದಾರೆ ಅಂತ ತಿಳಿದು ಬಂದಿದೆ.ಇದೇ ವೇಳೆ, ಸಂಸದರು, ಸತತ ಮೂರು ಬಾರಿ ಸೋತವರಿಗೆ ಟಿಕೆಟ್ ಇಲ್ಲ ಅನ್ನೋ ಹೊಸ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಅಲ್ಲದೆ, ರಾಜ್ಯ ಬಿಜೆಪಿಯನ್ನ ಕಂಟ್ರೋಲ್‍ಗೆ ತೆಗೆದುಕೊಂಡಿದ್ದು, ಯಡಿಯೂರಪ್ಪ ಅವರೇ ಬೆಚ್ಚಿಬಿದ್ದಿದ್ದಾರೆ ಅಂತ ತಿಳಿದು ಬಂದಿದೆ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ಬಿಎಸ್‍ವೈ ಘೋಷಣೆ ಮಾಡಿದವವರಿಗೆಲ್ಲಾ ಟಿಕೆಟ್ ಸಿಗುತ್ತಾ…? ಅನ್ನೋ ಪ್ರಶ್ನೆ ಎದುರಾಗಿದೆ.Sign in to your account
Username or Email Address


Password

 Remember Me


