ಚಿಕ್ಕಮಗಳೂರು: ಆ ರಾಹುಲ್ ಗಾಂಧಿ ಮದುವೆಯಾಗ್ತಾನೆ ಅನ್ನೋದೇ ನಂಗೆ ಡೌಟ್ ಎಂದು ಆಯನೂರು ಮಂಜುನಾಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಅಧ್ಯಕ್ಷರ ವಿರುದ್ಧ ಲೇವಡಿ ಮಾಡಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ತನ್ನ ತಾಯಿಯಂತೆ ಇನ್ನೂ 20 ವರ್ಷ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನವನ್ನ ಬಿಡೋದಿಲ್ಲ. ಅವನು ಮದುವೆಯಾಗಿ, ಅವನಿಗೆ ಮಕ್ಕಳಾಗಿ, ಅದು ದೊಡ್ಡದಾದ ಮೇಲೆ ಅದು ಮುಂದಿನ ಅಧ್ಯಕ್ಷ. ಆ ರಾಹುಲ್ ಗಾಂಧಿ ಮದುವೆಯಾಗ್ತಾನೆ ಅನ್ನೋದೇ ಡೌಟ್ ನಂಗೆ. ಕಾಂಗ್ರೆಸ್‍ನಲ್ಲಿ ಅಧ್ಯಕ್ಷರಾಗುವಂತಹಾ ಯೋಗ್ಯತೆ ಯಾರಿಗೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಇದೇ ವೇಳೆ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ನಿಮ್ಮ ದುಡ್ಡು ತಿನ್ನೋದೇ ನಮ್ಮ ಜವಾಬ್ದಾರಿ ಅಂತ ಅವರು ತಿಳಿದುಕೊಂಡಿದ್ದಾರೆ. ನಿಮ್ಮ ಖರ್ಚಿನಲ್ಲಿ ನಮ್ಮ ಯಾತ್ರೆ ಮಾಡೋದು ಅಂತ ನಿಶ್ಚಯ ಮಾಡ್ಕೊಂಡು ಇವತ್ತು ಯಾತ್ರೆ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗ್ಬೇಕು ಎಂದು ಕಿಡಿಕಾರಿದ್ರು. 






 Advertisement 




Sign in to your account
Username or Email Address


Password

 Remember Me


