ಬೆಂಗಳೂರು: ನಮ್ಮ ರಾಜ್ಯದಲ್ಲೇ ಮಕ್ಕಳಿಗೆ ಕನ್ನಡ ಕಲಿಸೋಕೆ ಹಿಂದೇಟು ಹಾಕೋವಾಗ ಕನ್ನಡ ಪ್ರಿಯರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.ಕೇಂದ್ರ ಸರ್ಕಾರ ಹಾಕಿಕೊಂಡಿರೋ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆಯಡಿ ಮಧ್ಯಪ್ರದೇಶದಲ್ಲಿ ಗಡಿಯಾಚೆಗೆ ನುಡಿ ಸಂಭ್ರಮ ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ 21 ವಿದ್ಯಾರ್ಥಿಗಳು ಕನ್ನಡದ ಕಂಪು ಪಸರಿಸಿದ್ದಾರೆ.ಮಧ್ಯಪ್ರದೇಶದ ಅಲಿರಾಜಪುರ್ ಜಿಲ್ಲೆ ದೇಶದಲೇ ಅತೀ ಕಡಿಮೆ ಸಾಕ್ಷರತೆ ಹೊಂದಿದ ಜಿಲ್ಲೆಯಾಗಿದೆ. ಇಂತಹ ಜಿಲ್ಲೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಾವಣಗೆರೆಯ 21 ವಿದ್ಯಾರ್ಥಿಗಳು ಹೋಗಿ ಕರ್ನಾಟಕದ ವೈಶಿಷ್ಠತೆ ಬಗ್ಗೆ ತಿಳಿಸಿ ಬಂದಿದ್ದಾರೆ. ಅಷ್ಟೇ ಅಲ್ಲ ಮಧ್ಯಪ್ರದೇಶದ ಆದಿವಾಸಿ ಜನರ ಸಂಸ್ಕೃತಿಯನ್ನ ನಮ್ಮ ವಿದ್ಯಾರ್ಥಿಗಳು ಕಲಿತು ಬಂದಿದ್ದಾರೆ.ಇದಕ್ಕಿಂತಲೂ ಖುಷಿ ವಿಷಯ ಏನೆಂದರೆ ಈ ಶಾಲೆಯಲ್ಲಿ ಒಟ್ಟು 535 ವಿದ್ಯಾರ್ಥಿಗಳಿದ್ದು, ಅದರಲ್ಲಿ 310 ಮಕ್ಕಳು ಕನ್ನಡ ಭಾಷೆಯನ್ನ ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಕನ್ನಡ ಕಲಿಸಲು ಧರ್ಮಣ್ಣ ಚಿತ್ತಾ ಸೇರಿದಂತೆ ಇಬ್ಬರು ಶಿಕ್ಷಕರು ಇಲ್ಲಿದ್ದಾರೆ.ಮಧ್ಯಪ್ರದೇಶದ ಈ ಜಿಲ್ಲೆಯ ಮತ್ತೊಂದು ವಿಶೇಷತೆ ಏನೆಂದರೆ ಎಲ್ಲಾ ಕಡೆ ವರದಕ್ಷಿಣೆ ಕೊಟ್ಟು ಮದುವೆಯಾದರೆ, ಇಲ್ಲಿ ವಧುದಕ್ಷಿಣೆ ಕೊಟ್ಟು ಮದುವೆಯಾಗುವ ಸಂಪ್ರದಾಯವಿದೆ. ಇಲ್ಲಿ ಬಂಗಾರದ ಬದಲು ಜನರು ಮದುವೆಯಲ್ಲಿ ಬೆಳ್ಳಿ ಆಭರಣಗಳನ್ನೇ ಬಳಸುತ್ತಾರೆ.Sign in to your account
Username or Email Address


Password

 Remember Me


