ಬೆಂಗಳೂರು: ಡಿಕೆಶಿ (DK Shivakumar) ತುಂಬಾ ವೈಲ್ಡ್ ಆಗುತ್ತಿದ್ದಾರೆ. ಅವರು ಕಾಡಾನೆ ಥರ ಆಗುತ್ತಿದ್ದಾರೆ. ಯಾವಾಗ ಖೆಡ್ಡಾಕ್ಕೆ ಬೀಳುತ್ತಾರೆ ಎಂದು ನೋಡಬೇಕು ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara), ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.ಕನಕಪುರವನ್ನು (Kanakapura) ಬೆಂಗಳೂರಿಗೆ (Bengaluru) ಸೇರಿಸುವ ಕುರಿತು ಡಿಕೆಶಿ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ರಾಮನನಗರ (Ramanagara) ಜಿಲ್ಲೆ ಆಡಳಿತಾತ್ಮಕವಾಗಿ ಈಗ ಸರಿ ಇದೆ. ಹೌದು ನಾವೆಲ್ಲ ಬೆಂಗಳೂರಿನವರೇ. ಒಂದು ಕಾಲದಲ್ಲಿ ಬೆಂಗಳೂರು ಬೆಳೆದಿರಲಿಲ್ಲ. ಬೆಂಗಳೂರು ಬೆಳೆಯುತ್ತಿದ್ದಂತೆ ಒತ್ತಡ ಕಮ್ಮಿ ಮಾಡಲು ಜಿಲ್ಲೆಗಳಾದವು. ಈಗ ರಾಮನಗರ ಜಿಲ್ಲೆ ಆಡಳಿತಾತ್ಮಕವಾಗಿ ಸರಿ ಇದೆ. ಅದು ಹಾಗೇ ಇರಬೇಕು. ಡಿಕೆಶಿ ರಾಮನಗರವನ್ನೇ ಅಭಿವೃದ್ಧಿ ಮಾಡಲಿ. ಆಡಳಿತದ ಹತೋಟಿ ತಪ್ಪಿ ಹೋಗುತ್ತೆ ಅಂತಲೂ, ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಡಿಕೆಶಿ ಈ ರೀತಿ ಹೇಳಿರಬೇಕು ಎಂದರು. ಇದನ್ನೂ ಓದಿ: ಬರ ನಿರ್ವಹಣೆಗೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ಧ ಕೋಟ ಕಿಡಿಕಿಡಿರಾಜಕೀಯ ಮಹತ್ವಾಕಾಂಕ್ಷೆ ಇರುವವರಿಗೆ ಈ ಭಾವನೆ ತಪ್ಪಲ್ಲ. ಆದರೆ ಕನಕಪುರ ರಾಮನಗರದಲ್ಲೇ ಇದ್ದರೆ ಯಾರಿಗೂ ತೊಂದರೆ ಇಲ್ಲ. ಡಿಕೆಶಿಗೆ ಯಾವ ತೊಂದರೆ ಇದೆ ಅಂತ ಗೊತ್ತಿಲ್ಲ. ಇದನ್ನು ರಾಜಕೀಯಕರಣಗೊಳಿಸುವುದು ಬೇಡವಾಗಿತ್ತು. ಇದನ್ನು ಡಿಕೆಶಿ ಮತ್ತು ಹೆಚ್‌ಡಿಕೆ ಪ್ರತಿಷ್ಠೆ ಅನ್ನೋದಕ್ಕಿಂತ ಕನಕಪುರ ರಾಮನಗರದಲ್ಲೇ ಇರಲಿ. ಶಿವಕುಮಾರ್ ರಿಯಲ್ ಎಸ್ಟೇಟ್ ಅನ್ನು ಮನಸಲ್ಲಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಅವರ ಭೂ ದಾಹ ಇನ್ನೂ ಮುಗಿದಿಲ್ಲ ಅನಿಸುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯಸರ್ಕಾರ ಬೀಳಿಸಲು ಬಿಜೆಪಿಯ (BJP) ಒಂದು ಟೀಂ ಸಕ್ರಿಯವಾಗಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅಂತ ಅವರ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಶಾಸಕರಿಂದಲೇ ಅವರ ಸರ್ಕಾರಕ್ಕೆ ತೊಂದರೆ ಬರಬಹುದು. ಸರ್ಕಾರ ಬೀಳಿಸುವ ವಿಚಾರದಲ್ಲಿ ನಮ್ಮಿಂದ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸದ್ದಿಲ್ಲದೇ ನಡೆಯುತ್ತಿದೆ ಮಲಪ್ರಭಾ ನದಿ ಪ್ರದೇಶ ಒತ್ತುವರಿ ಕಾರ್ಯ – ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತಡಿಕೆಶಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ರಾಮನಗರ ಜಿಲ್ಲೆಯಲ್ಲೇ ಸುಧಾರಣೆ ಮಾಡಲಿ. ಡಿಕೆಶಿ ಹೇಳಿಕೆ ಅಚ್ಚರಿ ತಂದಿದೆ. ಒಕ್ಕಲಿಗರು ಬೆಂಗಳೂರಿನಲ್ಲಿ ಜಾಸ್ತಿ ಇದ್ದಾರೆ. ಬೆಂಗಳೂರಿನಲ್ಲಿ 25-30 ಜನ ಶಾಸಕರ ಮೇಲೆ ಹತೋಟಿ ಇಟ್ಟುಕೊಳ್ಳಬಹುದು. ಬೆಂಗಳೂರಿನ ಆಡಳಿತದ ಹತೋಟಿ ಒಕ್ಕಲಿಗರ ಹತೋಟಿಯಿಂದ ತಪ್ಪಿ ಹೋಗುತ್ತದೆ ಎಂದು ಈ ಹೇಳಿಕೆ ಕೊಟ್ಟಿರಬಹುದು. ಆಡಳಿತದ ಹತೋಟಿ ಹಿಡಿಯಲು ಮತ್ತೆ ನಾವು ಬೆಂಗಳೂರಿಗೆ ಸೇರಬೇಕು ಅನ್ನೋದು ಡಿಕೆಶಿ ಮನದಲ್ಲಿ ಇರಬಹುದು ಎಂದು ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರದ ಹಣ ತಿಂದಿಲ್ಲವೆಂದು ಹೆಚ್‍ಡಿಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ: ಬಾಲಕೃಷ್ಣWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


