ರಾಯಚೂರು: ನಟ ಉಪೇಂದ್ರ ಅಕ್ರಮವಾಗಿ ರೈತರ ಭೂಮಿಯನ್ನು ಕಬಳಿಸಿದ್ದಾರೆ. ಮೊದಲು ಅವರು ಮೆನೆ ಗೆದ್ದು, ಮಾರು ಗೆಲ್ಲಲಿ ಅಂತ ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪಕ್ಷ ಕಟ್ಟಲು, ಸಂಘಟನೆ ಮಾಡಲು ಅವಕಾಶಗಳಿವೆ. ಸಾರ್ವಜನಿಕ ಜೀವನಕ್ಕೆ ಬರುವವರಿಗೆ ಅವರ ಅಕ್ರಮವೇ ಅವರಿಗೆ ಸುಳಿಯಾಗಬಾರದು. ಅಕ್ರಮವಾಗಿ ರೈತರ ಭೂಮಿಯಲ್ಲಿ ರುಪ್ಪೀಸ್ ರೆಸಾರ್ಟ್ ಕಟ್ಟಿರುವ ಉಪೇಂದ್ರ ಅಕ್ರಮ ಸುರಳಿಯಿಂದ ಹೊರಬಂದು ಸಾರ್ವಜನಿಕ ಜೀವನಕ್ಕೆ ಕಾಲಿಡಲಿ ಅಂತ ಸಲಹೆ ನೀಡಿದ್ದಾರೆ.ತಮ್ಮ ಅಕ್ರಮದಿಂದ ಹೊರ ಬಂದು ಇತರರಿಗೆ ಒಳ್ಳೆಯದು ಮಾಡಲಿ. ನ್ಯಾಯಾಲಯದಲ್ಲಿ ಪ್ರಕರಣ ಹೇಗಾಯ್ತು, ಏನಾಯ್ತು ಅನ್ನೋದು ನಮಗೆ ಗೊತ್ತಿದೆ. ನಾವು ಇದರ ವಿರುದ್ದ ಧ್ವನಿ ಎತ್ತಿದಾಗ ನ್ಯಾಯಾಧೀಶರು ಪ್ರಕರಣದ ವಿಚಾರಣೆಗೆ ರೀಕಾಲ್ ಮಾಡಿದ್ದರು. ಉಪೇಂದ್ರ ಬಡ ರೈತರಿಗೆ ಅವರ ಜಮೀನು ಮರಳಿಸಬೇಕು ಅಂತ ಎಸ್.ಆರ್ .ಹಿರೇಮಠ್ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಜಮೀನು ವಿವಾದದಲ್ಲಿ ನಟ ಉಪೇಂದ್ರಗೆ ಹೈ ಕೋರ್ಟ್ ನಿಂದ ಬಿಗ್ ರಿಲೀಫ್https://youtu.be/7C5QPHui87Y Sign in to your account
Username or Email Address


Password

 Remember Me


