ಬೆಂಗಳೂರು: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ನಿಗದಿಪಡಿಸಿದ್ದ ದಿನಾಂಕವನ್ನು ಮೇ 29ರವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಕಾಫಿ ಪಡೆಯಲು ಮೇ27 ರವರೆಗೆ ಮಾಡಿಕೊಡಲಾಗಿದೆ ಎಂದು ಪಿಯು ಬೋರ್ಡ್ ತಿಳಿಸಿದೆ.ಇನ್ನೂ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಅಂಕಗಳ ಮರು ಮೌಲ್ಯಮಾಪನಕ್ಕೆ ಮೇ 29 ರವರೆಗೆ ಸಮಯಾವಕಾಶ ನೀಡಿದೆ. ಮೇ 11 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಇದನ್ನೂ ಓದಿ: ಕೋಚಿಂಗ್ ಇಲ್ದೇ, ಟ್ಯೂಷನ್‍ಗೆ ಹೋಗದೆ ಉಡುಪಿಯ ರಾಧಿಕಾ ಪೈ ರಾಜ್ಯಕ್ಕೆ ಫಸ್ಟ್ ಈ ಮೊದಲು ಉತ್ತರ ಪತ್ರಿಕೆ ಸ್ವೀಕರಿಸಲು (ಸ್ಕ್ಯಾನಿಂಗ್ ಪ್ರತಿಗೆ) ಅರ್ಜಿ ಸಲ್ಲಿಸಲು ಮೇ 19, ಮರು ಮೌಲ್ಯಮಾಪನ ಅರ್ಜಿ ಸಲ್ಲಿಸಲು ಮತ್ತು ಮರು ಏಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 24 ಆಗಿತ್ತು. ಪೂರಕ ಪರೀಕ್ಷೆ ಜೂನ್ 28ರಿಂದ ಜುಲೈ 8ರವರೆಗೆ ನಡೆಯಲಿದೆ. ಸಪ್ಲಿಮೆಂಟರಿ ಪರೀಕ್ಷೆಗೆ ಶುಲ್ಕ ಕಟ್ಟಲು ಜೂನ್ 23 ಕೊನೆ ದಿನಾಂಕವಾಗಿದೆ.ಇದನ್ನೂ ಓದಿ: ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ Sign in to your account
Username or Email Address


Password

 Remember Me


