ಚಾಮರಾಜನಗರ: ಆಸ್ತಿಗಾಗಿ ತಂದೆ, ತಾಯಿ ಮತ್ತು ಕಿರಿಯ ಮಗ ಮೂವರು ಸೇರಿ ಹಿರಿಯ ಮಗನನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಗೆಮರಳ್ಳಿ ಗ್ರಾಮದಲ್ಲಿ ನಡೆದಿದೆ.ಮುರುಗನ್ ಕೊಲೆಯಾದ ದುರ್ದೈವಿ. ತಂದೆ ಮಾರಪ್ಪ, ತಾಯಿ ಪುಷ್ಪ ಹಾಗು ತಮ್ಮ ಷಣ್ಮುಖ ಮೂವರು ಸೇರಿ ಮುರುಗನ್ ನನ್ನು ಕಬ್ಬಿಣದ ರಾಡಿನಿಂದ ತಲೆ ಭಾಗಕ್ಕೆ ಹೊಡೆದು ಕೊಲೆಗೈದಿದ್ದಾರೆ. ಭಾನುವಾರ ರಾತ್ರಿ ದನಗಳನ್ನು ಕೊಟ್ಟಿಗೆಯ ವಿಚಾರಚವಾಗಿ ಜಗಳ ನಡೆದಿತ್ತು. ಈ ವೇಳೆ ಮೂವರು ಸೇರಿ ಮುರುಗನ್ ಅವರನ್ನು ಕೊಲೆ ಮಾಡಿದ್ದಾರೆ.ಮುರುಗನ್ ಮತ್ತು ಷಣ್ಮುಖ ಇಬ್ಬರು ಸಹೋದರರು. ಇಬ್ಬರು ಬೇರೆ ಬೇರೆಯಾಗಿದ್ದು, ಮಾರಪ್ಪ ಮತ್ತು ಪುಷ್ಪಾ ಕಿರಿಯ ಮಗ ಷಣ್ಮುಖನೊಂದಿಗೆ ವಾಸವಾಗಿದ್ದರು. ಸಹೋದರರ ನಡುವೆ ಪದೇ ಪದೇ ಕೊಟ್ಟಿಗೆಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಕೊಲೆಯ ನಂತರ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಮೃತ ದೇಹವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಕೆಲವಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


