ಬೆಂಗಳೂರು: ಬಾಹುಬಲಿಯಲ್ಲಿ ದೇವಸೇನಾ ಪಾತ್ರದಲ್ಲಿ ಅಭಿನಯಿಸಿ ವೀಕ್ಷಕರ ಮೆಚ್ಚುಗೆ ಪಾತ್ರವಾಗಿರುವ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ ಕನ್ನಡ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.ಕನ್ನಡ ಸಿನಿಮಾದಲ್ಲಿ ನೀವು ನಟಿಸ್ತಾರ ಅಭಿಮಾನಿಯೊಬ್ಬರ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಅನುಷ್ಕಾ ಶೆಟ್ಟಿ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದು ಹೇಳಿದ್ದಾರೆ.ಬಾಹುಬಲಿ ಚಿತ್ರದ ತಂಡದ ಜೊತೆ ಅಭಿಮಾನಿಗಳ ಪ್ರಶ್ನೆಗೆ ಅನುಷ್ಕಾ ಶೆಟ್ಟಿ, ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ತಮನ್ನಾ ಭಟಿಯಾ ಉತ್ತರಿಸುತ್ತಿದ್ದರು. ಆನ್‍ಲೈನ್ ನಲ್ಲಿ ತಮ್ಮ ನೆಚ್ಚಿನ ನಟರಿಗೆ ಬಾಹುಬಲಿ ಸಿನಿಮಾದ ಕುರಿತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಅನುಷ್ಕಾ ಕನ್ನಡದಲ್ಲಿ ಈ ಮೇಲಿನಂತೆ ಉತ್ತರಿಸಿದ್ದಾರೆ.ಮೂಲತಃ ಕನ್ನಡ ಕರಾವಳಿಯ ಹುಡುಗಿಯಾಗಿರುವ ಅನುಷ್ಕಾ ಹುಟ್ಟಿ ಬೆಳದಿದ್ದು ಬೆಂಗಳೂರು ಮಹಾನಗರದಲ್ಲಿ. ಹಾಗಾಗಿ ಅನುಷ್ಕಾ ಶೆಟ್ಟಿಯವರ ಅಭಿಮಾನಿಗಳುನ ಕನ್ನಡ ಸಿನಿಮಾಗಳಲ್ಲಿ ನೋಡಲು ಕಾತುರರಾಗಿದ್ದಾರೆ. ಅನುಷ್ಕಾ ಟಾಲಿವುಡ್‍ನಲ್ಲಿ ಬೇಡಿಕೆಯ ನಟಿಯಾಗಿದ್ದು ಪೌರಾಣಿಕ, ಗ್ಲ್ಯಾಮರ್ ಸಿನಿಮಾಗಳಲ್ಲಿ ನಟಿಸಿರುವ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅರುಂಧತಿ, ಮಿರ್ಚಿ, ಬಾಹುಬಲಿ, ರುದ್ರಮಾದೇವಿ, ಜೀರೋ ಸೈಜ್ ಮುಂತಾದ ಹಿಟ್ ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.ಈ ವೀಡಿಯೋ 2015 ರಲ್ಲಿ ಅಪ್ಲೋಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಸ್ತುತ ಬಾಹುಬಲಿ- ದಿ ಕನ್‍ಕ್ಲೂಷನ್ ಸಿನಿಮಾ ತೆರೆಕಂಡಿದ್ದು, ಭಾರತೀಯ ಸಿನಿಮಾ ರಂಗದ ದಾಖಲೆಗಳನ್ನು ಮುರಿದು 1 ಸಾವಿರ ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ.   Sign in to your account
Username or Email Address


Password

 Remember Me


