ಬೆಂಗಳೂರು: ರಾತ್ರಿ ಕಾಡಿನಿಂದ ಬಂದ ಆನೆಗಳ ಗುಂಪಿನಿಂದ ಬೇರ್ಪಟ್ಟು ಬಂಡೆಯ ಕಂದಕದಲ್ಲಿ ಬಿದ್ದಿದ್ದ ಮೂರು ವರ್ಷದ ಆನೆಮರಿಯನ್ನು ರಕ್ಷಿಸಲಾಗಿದೆ.ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶದ ತಳಿ ಗ್ರಾಮದ ಹುಲಿಬಂಡೆ ಎಂಬ ಅರಣ್ಯದಲ್ಲಿ ಆನೆಮರಿ ಕಂದಕಕ್ಕೆ ಬಿದ್ದಿತ್ತು. ತಳಿ ಗ್ರಾಮದ ಸುತ್ತಮುತ್ತ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಈ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಆನೆಗಳು ವಾಸವಾಗಿವೆ.ಇದನ್ನೂ ಓದಿ: ವೀಡಿಯೋ: ಕಬ್ಬಿಣದ ಕಂಬಿಯ ಕೆಳಗೆ ಸಿಲುಕಿದ್ದ ಆನೆಯ ರಕ್ಷಣೆನೀರಿಗಾಗಿ ಹುಡಕಾಡುತ್ತಾ ಬಂಡೆಯ ಬಳಿಯ ಕೆರೆಗೆ ಆನೆಗಳು ಬಂದಿದ್ದು, ಈ ವೇಳೆ ಗುಂಪಿನಲ್ಲಿದ್ದ ಪುಟ್ಟ ಆನೆಮರಿ ಬಂಡೆಯ ಕಂದಕದಲ್ಲಿ ಬಿದ್ದಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಸದ್ಯ ಆನೆಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ಆನೆಮರಿಯನ್ನು ಸುರಕ್ಷಿತವಾಗಿ ಮತ್ತೆ ಆನೆಗಳ ಗುಂಪಿಗೆ ಸೇರಿಸಲಾಗಿದೆ. Sign in to your account
Username or Email Address


Password

 Remember Me


