ಮಂಗಳೂರು: ಕೆಂಪು ದೀಪ ಸರ್ಕಾರಿ ಕಾರು ಮೇಲೆ ಇದೆ. ಕೆಂಪು ದೀಪ ನನ್ನ ತಲೆ ಮೇಲೆ ಇಲ್ಲ ಅಂತಾ ಆಹಾರ ಸಚಿವ ಯುಟಿ ಖಾದರ್ ಖಡಕ್ ಉತ್ತರ ನೀಡಿದ್ದಾರೆ.ವಿಐಪಿ ಸಂಸ್ಕೃತಿ ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರಿಗೆ ಕೆಂಪು ಗೂಟವನ್ನು ಇಂದಿನಿಂದ ಅಧಿಕೃತವಾಗಿ ನಿಷೇದಿಸಿದ್ದು, ಆದ್ರೆ ಯು ಟಿ ಖಾದರ್ ಮಾತ್ರ ಇಂದು ಕೆಂಪುಗೂಟ ಇದ್ದ ಕಾರಿನಲ್ಲೇ ತಿರುಗಾಡಿದ್ದಾರೆ.ಕಾರಿನಿಂದ ಕೆಂಪು ದೀಪ ತೆಗೆಯೋಕೆ ಕೆಂಪು ದೀಪ ನನ್ನ ತಲೆ ಮೇಲಿಲ್ಲ. ತಲೆ ಮೇಲೆ ಇರ್ತಿದ್ರೆ ಕೆಳಗಿಡ್ತಾ ಇದೆ. ಆದ್ರೆ ಇದು ಸರ್ಕಾರಿ ಕಾರಿನ ಮೇಲೆ ಇದೆ. ಕೆಂಪು ದೀಪ ತೆಗೆಯೋದ್ರಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ನನಗೆ ರಾಜ್ಯ ಸರ್ಕಾರ ಕಾರು ಕೊಟ್ಟಿರೋದು. ಕೇಂದ್ರ ಸರ್ಕಾರ ಕೊಟ್ಟಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆದೇಶ ಕೊಟ್ರೆ ಕಾರಿನಿಂದ ಕೆಂಪು ದೀಪ ತೆಗೆಯೋದಾಗಿ ಹೇಳಿದ್ದಾರೆ.ಇದನ್ನೂ ಓದಿ: ಇಂದಿನಿಂದ ವಿಐಪಿ ಸಂಸ್ಕೃತಿಗೆ ಅಧಿಕೃತ ಬ್ರೇಕ್ – ಕೆಂಪೂಗೂಟದ ಕಾರು ಬಳಸಿದ್ರೆ ಬೀಳುತ್ತೆ ದಂಡಸರ್ಕಾರ ಕೊಟ್ಟ ಕಾರಿನಲ್ಲಿ ನಾನು ಕುತ್ಕೊಂಡು ಓಡಾಡೋದಷ್ಟೇ ನಮ್ಮ ಕೆಲಸ ಹೊರತು ಅದನ್ನು ಆಲ್ಟರ್ ಮಾಡೋ ಅವಕಾಶ ನಮಗಿಲ್ಲ. ಅಂತಹ ಸಂದರ್ಭಗಳು ಬಂದ್ರೆ ಇಲಾಖೆಯೇ ಕಾರನ್ನು ಆಲ್ಟರ್ ಮಾಡ್ತಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಆದೇಶಕ್ಕೆ ನಾವು ಬದ್ಧರಾಗುತ್ತೇವೆ ಅಂತಾ ಖಡಕ್ಕಾಗಿಯೇ ನುಡಿದಿದ್ದಾರೆ.ಇದನ್ನೂ ಓದಿ: ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂSign in to your account
Username or Email Address


Password

 Remember Me


