ಬೆಂಗಳೂರು: ಮಹಿಳೆಯೊಬ್ಬರ ನಗ್ನ ಮತ್ತು ಅರೆನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿರೋ ಅರಣ್ಯ ಅಧಿಕಾರಿ ವಿರುದ್ಧ ನೊಂದ ಮಹಿಳೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.ವಿವಾಹಿತ ಮಹಿಳೆಗೆ ಮದುವೆ ಆಗುವಂತೆ ದೌರ್ಜನ್ಯ ಎಸಗಿದ್ದಕ್ಕೆ ಅರಣ್ಯಾಧಿಕಾರಿ ಸಿ. ಕೃಷ್ಣ ಮತ್ತು ನಗ್ನ ಚಿತ್ರ ತೆಗೆದ ಸುಮಲತಾ ದೇವನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಏನಿದು ಪ್ರಕರಣ?: ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರೋ ಮಹಿಳೆಯ ನಗ್ನ ಚಿತ್ರವನ್ನು ಆಕೆಯ ಸ್ನೇಹಿತೆ ಸುಮಲತಾ ದೇವನ್ ತೆಗೆದು ಅರಣ್ಯಾಧಿಕಾರಿ ಸಿ. ಕೃಷ್ಣಗೆ ನೀಡಿದ್ದಾಳೆ. ಈ ಫೋಟೋವನ್ನು ಪಡೆದ ಕೃಷ್ಣ, ಮದುವೆ ಆಗುವಂತೆ ದೌರ್ಜನ್ಯವೆಸಗಿ ಬಳಿಕ ಲೈಂಗಿಕವಾಗಿ ಸಹಕರಿಸುವಂತೆ ಬ್ಲ್ಯಾಕ್ ಮೇಲೆ ಮಾಡಿದ್ದು, ಒಂದು ವೇಳೆ ನೀನು ಇದಕ್ಕೆ ಒಪ್ಪದಿದ್ದರೆ ನಿನ್ನ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಡುತ್ತೇನೆ ಅಂತಾ ಬೆದರಿಸಿದ್ದಾನೆ.2013 ರಿಂದ ಈವರೆಗೆ 4.76 ಲಕ್ಷ ರೂ. ಸುಲಿಗೆ ಮಾಡಿರೋ ಕೃಷ್ಣ 30 ಗ್ರಾಂ ಮಾಂಗಲ್ಯ ಸರವನ್ನು ಕೂಡ ಪಡೆದಿದ್ದಾನೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ಸಾಯಿಸೋದಾಗಿ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಧಾನಸೌಧ ಪೊಲೀಸರು ಕೃಷ್ಣ ವಿರುದ್ಧ ಎಫ್‍ಐಆರ್ ಹಾಗೂ ನಗ್ನ ಚಿತ್ರ ತೆಗೆದ ಸುಮಲತಾ ದೇವನ್ ಎಂಬುವರ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


