ಹಾವೇರಿ: ಊರಿನ ಮೂರು ಶಾಲೆಗಳನ್ನೇ ದತ್ತು ಪಡೆದು ಅಭಿವೃದ್ಧಿ ಮಾಡಿದ್ದ ಇವರು ಕುಡಿಯುವ ನೀರು ಪೂರೈಸ್ತಾರೆ, ಕೆರೆ ಹೂಳೆತ್ತಿಸ್ತಾರೆ. ಬಡ ಬಗ್ಗರಿಗೆ ಸಹಾಯ ಮಾಡೋ ಹಾವೇರಿಯ ಕಂಟ್ರಾಕ್ಟರ್ ಇಂದಿನ ಪಬ್ಲಿಕ್ ಹೀರೋ.ಎಷ್ಟೇ ಕೂಡಿಟ್ಟರೂ ಜನಕ್ಕೆ ಮತ್ತಷ್ಟು ಗಂಟು ಮಾಡಬೇಕು ಅನ್ನೋ ದುರಾಸೆ ಜಾಸ್ತಿ. ಆದ್ರೆ ನಮ್ಮ ಈ ಪಬ್ಲಿಕ್ ಹೀರೋಗೆ ಸಮಾಜಸೇವೆ ಮಾಡೋ ಆಸೆ. ವೃತ್ತಿಯಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿರೋ ಶ್ರೀಕಾಂತ್ ದುಂಡಿಗೌಡರ್ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬನ್ನೂರು ಗ್ರಾಮದವರು. ತಾವು ಓದಿದ ಶಾಲೆ ಸೇರಿದಂತೆ ಊರಿನ ಇತರೆ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ತಾವು ಓದಿದ ಶಾಲೆ ಜೊತೆಗೆ ಉರ್ದು ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಶಾಲೆಯಲ್ಲಿ ಅದ್ಭುತ ಕೈದೋಟ ಮಾಡಿದ್ದಾರೆ. ಇದಕ್ಕೆಲ್ಲಾ ನೀರು ಪೂರೈಸಲು ಭರತ ಅನ್ನೋ ಸೇವಾ ಸಂಸ್ಥೆ ಕೈಜೋಡಿಸಿದೆ.ಆಶ್ಚರ್ಯ ಅಂದ್ರೆ ತಾವೇ ಸ್ವಂತಕ್ಕೆ 10 ಲಕ್ಷ ರೂಪಾಯಿ ಖರ್ಚು ಮಾಡಿ ಶಿಗ್ಗಾಂವಿ ಪಟ್ಟಣಕ್ಕೆ ಕುಡಿಯವ ನೀರು ಒದಗಿಸುವ ಕೆರೆಯ ಹೂಳೆತ್ತಿಸಿದ್ದಾರೆ. ಇಷ್ಟೇ ಅಲ್ಲ ಬಡವರ ಮದುವೆಗಳಿಗೆ, ಅಂತ್ಯಕ್ರಿಯೆಗಳಿಗೆ ಧನ ಸಹಾಯ ಮಾಡ್ತಾರೆ.ಲಾಭ ಇಲ್ಲ ಅಂದ್ರೆ 10 ರೂಪಾಯಿ ಖರ್ಚು ಮಾಡೋಕೆ ಹಿಂದೆ ಮುಂದೆ ನೋಡೋ ಈ ಕಾಲದಲ್ಲಿ ಶ್ರೀಕಾಂತ್ ವರ್ಷಕ್ಕೆ 15 ಲಕ್ಷ ರೂಪಾಯಿಯನ್ನು ಸಮಾಜ ಸೇವೆಗೆ ಖರ್ಚು ಮಾಡ್ತಾರೆ. ನಿಜಕ್ಕೂ ಇವರು ಪಬ್ಲಿಕ್ ಹೀರೋನೇ ಸರಿ.






 Advertisement 




Sign in to your account
Username or Email Address


Password

 Remember Me


