ಧಾರವಾಡ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಧಾರವಾಡದ ಬೋಗೂರ ಗ್ರಾಮದಲ್ಲಿ ನಡೆದಿದೆ.ಭೀಮವ್ವ ಮಾಳವಾಡ ಮೃತ ಮಹಿಳೆ. ಭೀಮವ್ವ 14 ತಿಂಗಳ ಹಿಂದೆ ಗ್ರಾಮದ ನಾಗಪ್ಪ ಎಂಬುವನನ್ನು ಮದುವೆ ಆಗಿದ್ದರು. ವರದಕ್ಷಿಣೆ ಕಿರುಕುಳವೇ ಭೀಮವ್ವ ಸಾವಿಗೆ ಕರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇತ್ತ ಭೀಮವ್ವ ಪತಿ ನಾಗಪ್ಪ ಘಟನೆ ಬಳಿಕ ಪರಾರಿಯಾಗಿದ್ದಾನೆ. ಮಹಿಳೆಯ ಅತ್ತೆ ಮಾವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


