ಶಬರಿಮಲೆ: ಏಪ್ರಿಲ್ 6ರಂದು ಇರುಮುಡಿ ಹೊತ್ತುಕೊಂಡು ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ತೆರಳಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಯಿಂದ ವಾಪಸ್ಸಾಗಲಿದ್ದಾರೆ.ಮಾಲಾಧಾರಿಯಾಗಿದ್ದ ದರ್ಶನ್ ಗುರುವಾರದಂದು ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡಿದ್ರು. ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಇನ್ನೂ ಅನೇಕ ಆಪ್ತರು ಪ್ರಯಾಣ ಬೆಳೆಸಿದ್ರು. ದರ್ಶನ್ ಶಬರಿಮಲೆಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರೋ ಫೋಟೋಗಳು ಲಭ್ಯವಾಗಿವೆ.   Sign in to your account
Username or Email Address


Password

 Remember Me


