ಬೆಂಗಳೂರು: ಕೊನೆಗೂ ಪ್ರಥಮ್ ಬಿಗ್ ಬಾಸ್ ಸೀಸನ್-4ರಲ್ಲಿ ಗೆದ್ದ ಬಹುಮಾನದ ಹಣವನ್ನ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕೊಡಲು ಮುಂದಾಗಿದ್ದಾರೆ.ಇಷ್ಟು ದಿನ ಅಂದುಕೊಂಡ ಮಾತನ್ನ ಉಳಿಸಿಕೊಳ್ಳಲಿಲ್ಲ ಅಂತ ಪ್ರಥಮ್ ಮೇಲೆ ಆರೋಪದ ಸುರಿಮಳೆ ಕೇಳಿಬರ್ತಿತ್ತು. ಆದ್ರೆ ಅನೇಕ ಕಾರಣಗಳಿಂದ ಬಹುಮಾನದ ಹಣ ಇಲ್ಲಿವರೆಗೂ ಪ್ರಥಮ್ ಕೈ ಸೇರಿರಲಿಲ್ಲ.ಇದೀಗ ಹಣ ಸಿಕ್ಕ ಕೂಡಲೇ ಪ್ರಥಮ್ ಮೈಸೂರಿಗೆ ತೆರಳಿ ಯೋಧರ ನೆರವಿಗಾಗಿ ಬ್ಯಾಂಕ್ ಮೂಲಕ ಚೆಕ್ ತೆಗೆದುಕೊಂಡು ಅದನ್ನ ಪಿಎಮ್ ರಿಲೀಫ್ ಫಂಡ್‍ಗೆ ಕೊಡೋಕೆ ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಥಮ್ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.ಬಿಗ್‍ಬಾಸ್‍ನಲ್ಲಿ ಹಣವನ್ನು ಏನು ಮಾಡಬೇಕು ಎಂದು ವೇದಿಕೆಯ ಮೇಲೆ ನಿಂತು ಪ್ರಥಮ್ ತನ್ನ ತಂದೆಯನ್ನ ಕೇಳಿದ್ದರು. ಇದಕ್ಕೆ ಪ್ರಥಮ್ ತಂದೆ ಯೋಧರು ಹಾಗೂ ನಾಡಿನ ಮೃತ ರೈತರ ಕುಟುಂಬಕ್ಕೆ ಹಣ ನೀಡು ಎಂದು ಹೇಳಿದ್ದರು. ಅದರಂತೆ ಯೋಧರು ಹಾಗೂ ರೈತರಿಗಾಗಿ ಬಹುಮಾನದ ಹಣವನ್ನು ಸಮರ್ಪಿಸುತ್ತೇನೆಂದು ವೇದಿಕೆ ಮೇಲೆಯೇ ಪ್ರಥಮ್ ಹೇಳಿದ್ದರು.Sign in to your account
Username or Email Address


Password

 Remember Me


