ಕಲಬುರಗಿ: ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ, `ಜನರ ಎಸಿ’ ಅಂತಾನೇ ಖ್ಯಾತಿಯಾಗಿದ್ದ ಸೇಡಂ ಎಸಿ ಭೀಮಾಶಂಕರ್ ತೆಗಳ್ಳಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.ಭೀಮಾಶಂಕರ್ ತೆಗಳ್ಳಿ ಅವರು ಕಳೆದ ಎರಡು ತಿಂಗಳಲ್ಲಿ 48 ಪ್ರಕರಣ ಪತ್ತೆ ಮಾಡಿದ್ದರು. ಮಾತ್ರವಲ್ಲದೇ 2016ರಲ್ಲಿ 276 ಅಕ್ರಮ ಮರಳು ದಂಧೆ ಪ್ರಕರಣ ದಾಖಲಿಸಿದ್ದರು. ರಾತ್ರಿ ವೇಳೆ ನಡೆಯೋ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರು.ಏಕ ಕಾಲದಲ್ಲಿ ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ಎಸಿಯಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದ ಇವರು `ಜನರ ಎಸಿ’ ಅಂತಾನೆ ಖ್ಯಾತಿ ಪಡೆದಿದ್ದರು. ಕಳೆದ ವಾರ ತೆಗಳ್ಳಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಭೀಮಾಶಂಕರ್ ಅವರ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಅಧಿಕಾರಿಯಾಗಿ ಭೀಮಾಶಂಕರ್ ತೆಗಳ್ಳಿ ವರ್ಗಾವಣೆಗೊಂಡಿದ್ದಾರೆ.Sign in to your account
Username or Email Address


Password

 Remember Me


