ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅನ್ನೋ ಕಾರಣ ಹೇಳಿ ಮಧ್ಯರಾತ್ರಿ ವೇಳೆ ತುಂಬು ಗರ್ಭಿಣಿಯನ್ನ ಆಸ್ಪತ್ರೆಯಿಂದ ಹೊರಗೆ ಕಳುಹಿಸಿರುವ ಅಮಾನವೀಯ ಘಟನೆ ನಡೆದಿದೆ.ಹೆರಿಗೆಗಾಗಿ ಯಾದಗಿರಿಯ ಮುಂಡರಗಿಯಿಂದ ಬಂದ ಒಂಭತ್ತು ತಿಂಗಳ ಗರ್ಭಿಣಿ ಮಹಾದೇವಮ್ಮ ಎರಡು ದಿನಗಳಿಂದ ರಿಮ್ಸ್ ಆಸ್ಪತ್ರೆಯಲ್ಲಿದ್ದರು. ಮೊದಲಿಗೆ ತಪಾಸಣೆ ನಡೆಸಿದ ವೈದ್ಯರು ಎರಡು ದಿನದಲ್ಲಿ ಹೆರಿಗೆಯಾಗುವುದಾಗಿ ಹೇಳಿದ್ದರು, ಆದ್ರೆ ಬಳಿಕ ಗರ್ಭಿಣಿಯನ್ನ ನೋಡಲು ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ ಎನ್ನಲಾಗಿದೆ. ಹೀಗಾಗಿ ರಾತ್ರಿವೇಳೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಏಕಾಏಕಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಕೂಡಲೇ ಬೆಡ್ ಖಾಲಿ ಮಾಡುವಂತೆ ಒತ್ತಾಯಿಸಿ ಆಸ್ಪತ್ರೆಯಿಂದ ಹೊರಗಡೆ ಕಳುಹಿಸಿದ್ದಾರೆ.ತುಂಬು ಗರ್ಭಿಣಿ ಆಸ್ಪತ್ರೆ ಮುಂದೆ ಅಸಹಾಯಕಳಾಗಿ ನಿಂತಿರುವುದನ್ನ ಪಬ್ಲಿಕ್ ಟಿವಿ ಚಿತ್ರಿಕರಿಸುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಕೂಡಲೇ ಅಂಬುಲೆನ್ಸ್ ತಂದು ಮಹಾದೇವಮ್ಮರನ್ನ ಮರಳಿ ಆಸ್ಪತ್ರೆಗೆ ಕರೆದ್ಯೊಯ್ದು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.ದೂರದ ಊರುಗಳಿಂದ ಬರುವ ಬಡ ರೋಗಿಗಳಿಗೆ ವರದಾನವಾಗಬೇಕಾದ ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯದ ಕೂಪವಾಗಿದೆ. ವೈದ್ಯರ ಕೊರತೆ ಮೊದಲಿನಿಂದಲೂ ಕಾಡುತ್ತಿದ್ದು, ರಾತ್ರಿ ವೇಳೆ ಯಾವೊಬ್ಬ ವೈದ್ಯರೂ ಆಸ್ಪತ್ರೆ ಕಡೆ ತಲೆ ಹಾಕದಿರುವುದು ಇಲ್ಲಿಗೆ ಬರುವ ರೋಗಿಗಳಲ್ಲಿ ಆತಂಕ ಮೂಡಿಸಿದೆ. ರಾತ್ರಿ ಪಾಳೆಯಲ್ಲಿ ಕೇವಲ ವೈದ್ಯಕೀಯ ವಿದ್ಯಾರ್ಥಿಗಳಿಂದಲೇ ಆಸ್ಪತ್ರೆ ನಡೆಯುತ್ತಿರುವುದು ಹಲವಾರು ಯಡವಟ್ಟುಗಳಿಗೆ ಕಾರಣವಾಗಿದೆ.






 Advertisement 




Sign in to your account
Username or Email Address


Password

 Remember Me


