ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಯುಗಾದಿ ಆಚರಣೆ ಮಾಡದೇ ಇರಲು ನಿರ್ಧರಿಸಿದ್ದಾರೆ.ಸಿಎಂ ಪುತ್ರ ರಾಕೇಶ್ ಸಿದ್ಧರಾಮಯ್ಯ ಅಕಾಲಿಕ ನಿಧನರಾಗಿ ಇನ್ನೂ ಒಂದು ವರ್ಷ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ಯುಗಾದಿ ಹಬ್ಬ ಆಚರಣೆಯಿಂದ ಸಿಎಂ ಕುಟುಂಬ ದೂರ ಉಳಿದಿದೆ. ಮಾತ್ರವಲ್ಲದೇ ಈ ವರ್ಷ ಪೂರ್ತಿ ಯಾವುದೇ ಹಬ್ಬಗಳನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.ಹೀಗಾಗಿ ನಾಡಿನೆಲ್ಲೆಡೆ ಬರದ ನಡುವೆಯೂ ಜನ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಸಿಎಂ ಮನೇಲಿ ಯಾವುದೇ ಸಂಭ್ರಮ ಸಡಗರ ಇಲ್ಲ. ಮನೆಗೆ ಬರುವ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಕೇವಲ ಹೋಳಿಗೆ ಕೊಟ್ಟು ಸಿಎಂ ಶುಭಾಶಯ ತಿಳಿಸುತ್ತಿದ್ದಾರೆ.ಪ್ರತಿ ಹಬ್ಬದಲ್ಲಿ ಯಾರೇ ಸಿಎಂ ನಿವಾಸಕ್ಕೆ ಬಂದ್ರು ಹೋಳಿಗೆ ಕೊಡುವುದು ಪದ್ಧತಿ. ಹೀಗಾಗಿ ಈ ಯುಗಾದಿ ಹಬ್ಬವನ್ನು ಯಾವುದೇ ಸಂಭ್ರವಿಲ್ಲದೇ ಸಿಎಂ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.Sign in to your account
Username or Email Address


Password

 Remember Me


