ಬೆಂಗಳೂರು: ವರದಕ್ಷಿಣಿಯ ಹಣವನ್ನು ಕೊಟ್ಟಿಲ್ಲ ಅಂದ್ರೆ ಮಂಚಕ್ಕೆ ಏರಬೇಡ ಎಂದು ಪೀಡಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ಈಗ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪತಿ ಮಹೇಶ್, ಅತ್ತೆ ಶಕುಂತಲ, ಮಾವ ಶಿವನಾರಾಯಣ ವಿರುದ್ಧ ಪತ್ನಿ ದಿವ್ಯಾ(ಹೆಸರು ಬದಲಾಯಿಸಲಾಗಿದೆ) ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.ಪತ್ನಿ ಆರೋಪ ಏನು?
ಮಹಾಗಣಪತಿ ನಗರದಲ್ಲಿ ನೆಲೆಸಿರುವ ಮಹೇಶ್ ಜೊತೆ ನನ್ನ ವಿವಾಹ 2016ರ ಮೇ1ರಂದು ನಡೆದಿದೆ. ಮದುವೆ ವೇಳೆ ಚಿನ್ನ, ಹಣ ನೀಡುವಂತೆ ಪೀಡಿಸುತ್ತಿದ್ದರು. ಮದುವೆಯಾದ ಬಳಿಕ ಪತಿ ಮನೆಯವರು ಕಿರುಕುಳ ಜಾಸ್ತಿ ಆಗಿದ್ದು, ನನ್ನ ಮೇಲೆ ಹಲ್ಲೆ ನಡೆಸಿ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ವರದಕ್ಷಿಣೆಯ ತರದೇ ನಿನ್ನ ಮೇಲೆ ಲೈಂಗಿಕ ಕ್ರಿಯೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಹಣವನ್ನು ತರದಿದ್ದರೆ ಈ ಮನೆಯಲ್ಲಿ ನೀನು ಇರಬಾರದು. ಇದ್ದರೆ ಜೀವ ಸಹಿತ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ, ಇವರ ಕಿರುಕುಳಕ್ಕೆ ಬೇಸತ್ತು ನಾನು 2017ರ ಜನವರಿ 23ರಂದು ತವರು ಮನೆಗೆ ಹೋಗಿದ್ದೇನೆ. ಹೀಗಾಗಿ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ನಿ ದಿವ್ಯಾ ದೂರು ನೀಡಿದ್ದಾರೆ.ಇದನ್ನೂ ಓದಿ: ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!Sign in to your account
Username or Email Address


Password

 Remember Me


