ನೆಲಮಂಗಲ: ಚಾಣಾಕ್ಷ ಕಳ್ಳನೊಬ್ಬ 10 ರೂಪಾಯಿ ಸ್ಕೇಲ್ ಖರೀದಿಸಿ, ಲಕ್ಷಾಂತರ ಮೌಲ್ಯದ ಕಾರನ್ನೇ ಕಳ್ಳತನ ಮಾಡುತ್ತಿದ್ದ ಎಂದರೆ ನೀವು ನಂಬುತ್ತೀರಾ..?ಹೌದು, ಚಾಣಾಕ್ಷತೆಯಿಂದ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಮಂಜ ಅಲಿಯಾಸ್ ಕ್ವಾಲಿಸ್ ಮಂಜ, ಕುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ.ಮೂಲತಃ ಹಾಸನ ಜಿಲ್ಲೆಯ ಮಟ್ಟನವಿಲೆ ಗ್ರಾಮದ ನಿವಾಸಿಯಾಗಿರುವ ಮಂಜ, ಕೆಲ ದಿನದ ಹಿಂದೆ ನೆಲಮಂಗಲದ ದಾಸನಪುರ ತೋಟದಗುಡ್ಡದಹಳ್ಳಿಯಲ್ಲಿ ಕಾರುಗಳನ್ನ ಕದ್ದು ಪರಾರಿಯಾಗಿದ್ದ. ಆದರೆ ಈತ ಕಾರುಗಳನ್ನು ಚಾಣಾಕ್ಷತೆಯಿಂದ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತನ್ನ ಬುದ್ಧಿ ಉಪಯೋಗಿಸಿ ಕೇವಲ 10 ರೂಪಾಯಿ ಸ್ಕೇಲ್ ಸಹಾಯದಿಂದ, ಮನೆ ಮುಂದೆ ನಿಂತಿರುವ ಲಕ್ಷಾಂತರ ರೂಪಾಯಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದ. ಅಲ್ಲದೆ ಈ ಕದ್ದ ಕಾರಿನಲ್ಲಿ ಕುರಿಗಳನ್ನ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಕಳ್ಳತನ ಹೇಗೆ?
10 ರೂ. ಸ್ಕೇಲ್ ಮೂಲಕ ಕಾರಿನ ಡೋರನ್ನು ಓಪನ್ ಮಾಡುತ್ತಿದ್ದ. ಡೋರ್ ಓಪನ್ ಆದ ಬಳಿಕ ಮೆಕಾನಿಕ್ ಬುದ್ಧಿಯಿಂದ ಸ್ಟೇರಿಂಗ್ ಲಾಕನ್ನು ಒಡೆದು, ವಯರ್‍ಗಳನ್ನು ಜೋಡಿಸಿ ಆನ್ ಮಾಡಿ ಗೇರ್ ಬದಲಾಯಿಸಿ ಕಾರನ್ನು ಚಲಾಯಿಸಿ ಕಳ್ಳತನ ಎಸಗುತ್ತಿದ್ದ.ಮಾದನಾಯಕನಹಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದು, ಎರಡು ಕ್ವಾಲಿಸ್ ಹಾಗೂ ಒಂದು ಟಾಟಾ ಇಂಡಿಕಾ ಕಾರನ್ನ ವಶಪಡಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


