ಬೆಂಗಳೂರು: ಹುಡುಗ, ಹುಡುಗಿಯ ಲವ್, ಥಳಿತ ಕೇಸ್‍ನಲ್ಲಿ ನಟ ಉಪೇಂದ್ರ ಅವರ ಮುಂದಿನ ‘ಡಾಕ್ಟರ್ ಮೋದಿ’ ಸ್ಕ್ರಿಪ್ಟ್ ಕಾಪಿಯನ್ನು ಯುವತಿಯ ಪೋಷಕರು ಕದ್ದುಕೊಂಡು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ.ಈ ಪ್ರಕರಣದ ಸಂಬಂಧ ಪ್ರಿಯಕರ ರಮೇಶ್ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ವೇದಾವತಿ ಮತ್ತು ಮಾವ ರಮೇಶ್ ಮೇಲೆ ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಏನಿದು ಲವ್ ಸ್ಟೋರಿ?
ತೀರ್ಥಹಳ್ಳಿ ಮೂಲದ ಎಂಕಾಂ ಓದಿರುವ ಶ್ರೀಕರ ಹಾಗೂ ಕೋಲಾರದ ಬಿಇ ಪದವೀಧರೆ ಶ್ವೇತಾಗೆ ಶಾದಿ ಡಾಟ್ ಕಾಂನಲ್ಲಿ ಪರಿಚಯವಾಗಿದೆ. ಈ ಪರಿಚಯ ಕೆಲ ದಿನಗಳ ಬಳಿಕ ಪ್ರೀತಿಗೆ ತಿರುಗಿದೆ. ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇವರು ಕಳೆದ ಒಂದು ವರ್ಷ 8 ತಿಂಗಳಿನಿಂದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.ಈ ಮಧ್ಯೆ ಶ್ವೇತಾ ಎರಡು ಭಾರಿ ಗರ್ಭವತಿಯಾಗಿದ್ದು, ತಾಯಿ ಅಬಾರ್ಷನ್ ಮಾಡಿಸಿದ್ದರಂತೆ. ಇದಾದ ಬಳಿಕ ಶ್ವೇತಾ ತಾಯಿ ವೇದಾವತಿ ಮತ್ತು ಮಾವ ರಮೇಶ್, ಕದ್ದು ಮುಚ್ಚಿ ಮದುವೆಯಾಗಿರುವುದು ಸರಿಯಲ್ಲ, ಅದ್ಧೂರಿಯಾಗಿ ಸಾರ್ವಜನಿಕವಾಗಿ ನಿಮ್ಮಿಬ್ಬರಿಗೂ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಮಗಳನ್ನು ಕೋಲಾರಕ್ಕೆ ಕರೆದೊಯ್ದಿದ್ದಾರೆ.ರಮೇಶ್ ಆರೋಪ ಏನು?
ಊರಿಗೆ ಕರೆದೊಯ್ದ ನಂತರ ಶ್ವೇತಾ ಪೋಷಕರು ಮದುವೆ ವಿಚಾರ ಮಾತನಾಡಬೇಕು ಕೋಲಾರಕ್ಕೆ ಬಾ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದರು. ಫೋನ್ ಕರೆಯ ಹಿನ್ನೆಲೆಯಲ್ಲಿ ಭಾನುವಾರ ಕೋಲಾರಕ್ಕೆ ಬಂದಾಗ ನನ್ನ ಮೇಲೆ ಮೇಲೆ ಶ್ವೇತಾ ತಾಯಿ ವೇದಾವತಿ ತಮ್ಮ ರಮೇಶ್ ಕೆಲ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಕಾರಿನಲ್ಲಿ ನನ್ನನ್ನು ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಮನೆಗೆ ಕರೆ ತಂದು ನನ್ನ ಮತ್ತು ಶ್ವೇತಾ ಮದುವೆಗೆ ಸಂಬಂಧಿಸಿದ ಫೋಟೋಗಳು, ಲವ್ ಲೆಟರ್ ಗಳು ಮತ್ತು ನನ್ನ ಆಫೀಸ್‍ಗೆ ಸಂಬಂಧಿಸಿದ ಕೆಲ ಡಾಟಾ ಮತ್ತು ಮಾರ್ಕ್ಸ್ ಕಾರ್ಡ್‍ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.ಮೋದಿ ಸ್ಕ್ರಿಪ್ಟ್ ಹೋಯ್ತು:
ನಿರ್ದೇಶಕ ಉದಯ್ ಪ್ರಕಾಶ್ ಅವರಿಗೆ ಸಹಾಯಕನಾಗಿ ನಾನು ಕೆಲಸ ಮಾಡುತ್ತಿದ್ದು, ನಟ ಉಪೇಂದ್ರ ಅವರ ಮುಂದಿನ ಚಿತ್ರ ಡಾಕ್ಟರ್ ಮೋದಿಗೆ ಸ್ಕ್ರಿಪ್ಟ್ ಮಾಡಿದ್ದೆ. ಆ ಸ್ಕ್ರಿಪ್ಟ್ ಹಾರ್ಡ್ ಕಾಪಿಯನ್ನೂ ಶ್ವೇತಾ ಪೋಷಕರು ಕದ್ದುಕೊಂಡು ಹೋಗಿದ್ದಾರೆ. ಹೀಗಾಗಿ ನನಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಎಚ್‍ಎಸ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
 






 Advertisement 




 Sign in to your account
Username or Email Address


Password

 Remember Me


