ದಾವಣಗೆರೆ: ರಾಷ್ಟ್ರ ಪಕ್ಷಿ ನವಿಲನ್ನು ಬೇಟೆಯಾಡಿದ ಆರೋಪದ ಮೇಲೆ ಹರಿಹರ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ.ದಾವಣಗೆರೆ ನಗರದ ಎಸ್‍ಎಸ್ ಲೇಔಟ್ ನಿವಾಸಿ ಮೆಹಬೂಬ್ ಬಾಷಾ (55), ಟಿಪ್ಪು ನಗರದ ನಿವಾಸಿ ಇಕ್ಬಾಲ್ (28) ಬಂಧಿತ ಆರೋಪಿಗಳು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ಶುಕ್ರವಾರ ತಡ ರಾತ್ರಿ ನವಿಲನ್ನು ಬೇಟೆಯಾಡಲಾಗಿದ್ದು, ಹೆಣ್ಣು ನವಿಲನ್ನು ಗುಂಡಿಟ್ಟು ಕೊಲ್ಲಾಗಿದೆ.ಬಂಧಿತರಿಂದ ಲೈಸ್ಸನ್ಡ್ ಎಸ್‍ಬಿಬಿಎಲ್ ಗನ್ (ಸಿಂಗಲ್ ಬ್ಯಾರಲ್ ಬ್ರೀಚ್ ಲೋಡಿಂಗ್ ರೈಫಲ್) ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ನವಿಲು ಮಾಂಸ ಮಾರಾಟಕ್ಕಾಗಿ ಬೇಟೆಗೆ ಇಳಿದಿದ್ದು, ಹರಿಹರ ಸಿಪಿಐ ಜಯಣ್ಣ ಎಸ್.ನೇಮಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


