ಬೆಂಗಳೂರು: ಮಹದಾಯಿ ಯೋಜನೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಪರ ಆತ್ಮಾರಾಮ ನಾಡಕರ್ಣಿ ವಾದಮಾಡಲು ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ, ಶಾಸಕ ಕೋನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬೇಕಿದ್ದರೆ ಸಾಲಿಸಿಟರ್ ಹುದ್ದೆಯಿಂದ ಆತ್ಮಾರಾಮ ನಾಡಕರ್ಣಿಗೆ ವಿಮುಕ್ತಿಕೊಡಿ. ಆ ಬಳಿಕ ಬೇಕಾದರೆ ಅವರು ಗೋವಾ ಪರ ವಾದಮಾಡಲಿ. ಆದರೆ ಸಾಲಿಸಿಟರ್ ಆಗಿದ್ದು ವಾದ ಮಾಡುವುದು ಸರಿಯಲ್ಲ. ಅವರಿಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ಕ್ರಮ ಕೂಡ ಸರಿಯಲ್ಲ ಅಂತಾ ಶಾಸಕರು ಕಿಡಿಕಾರಿದ್ದಾರೆ.ಈ ಕೂಡಲೇ ಅವರನ್ನ ಹುದ್ದೆಯಿಂದ ವಜಾಗೊಳಿಸಿ. ಇಲ್ಲವೇ ಗೋವಾ ಪರ ವಾದ ಮಂಡನೆಗೆ ಅವಕಾಶ ರದ್ದು ಮಾಡಿ. ರಾಜ್ಯದ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ಧ್ವನಿಯೆತ್ತುತ್ತಿಲ್ಲ?. ಮಹದಾಯಿ ಹೋರಾಟಗಾರ ಸಮಸ್ಯೆ ನಿಮಗೆ ಅರ್ಥವಾಗುತ್ತಿಲ್ಲವೇ? ಇದರ ಬಗ್ಗೆ ನೀವು ಸುಮ್ಮನಿರುವುದೇಕೆ? ಅಂತಾ ರಾಜ್ಯ ಬಿಜೆಪಿ ಸಂಸದರು, ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೋನರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.Sign in to your account
Username or Email Address


Password

 Remember Me


