ಬೆಂಗಳೂರು: ಮನೆಗಳ ಗೋಡೆ, ಚಾವಣಿಗಳು ಬಿರುಕು ಬಿಟ್ಟಿವೆ. ಗೋಡೆ ಗೋಡೆಗಳೇ ಕುಸಿದು ಬಿದ್ದಿವೆ. ಪ್ರತಿನಿತ್ಯ ಭೂಮಿ ನಡುಗುತ್ತಿದೆ. ಇದು ಬೆಂಗಳೂರು ನಗರದ ವಿದ್ಯಾರಣ್ಯಪುರ ಬಳಿಯ ದೊಡ್ಡಬೆಟ್ಟಹಳ್ಳಿಯ ಕಾಲೋನಿಯಲ್ಲಿನ ಪರಿಸ್ಥಿತಿ.ಕಳೆದ ಆರು ತಿಂಗಳಿನಿಂದ ಇಲ್ಲಿ ಉಮ್ರಾ ಡೆವಲಪರ್ಸ್ ಕಲ್ಲು ಗಣಿಗಾರಿಕೆಯನ್ನು ನಡೆಸ್ತಿದ್ದಾರೆ. ಹೀಗಾಗಿ ಇಲ್ಲಿ ಪ್ರತಿದಿನ ಹಗಲು ರಾತ್ರಿಯೆನ್ನದೇ ಡೈನಮೈಟ್ ಸ್ಫೋಟಗೊಳ್ಳುತ್ತಿವೆ. ಇದ್ರಿಂದ ಜನ ಪ್ರತಿದಿನ ಏನಾಗುತ್ತೋ ಅನ್ನೋ ಆತಂಕದಲ್ಲೇ ದಿನ ಕಳೀತಿದ್ದಾರೆ. ಪರೀಕ್ಷೆ ಸಮಯ ಕರ್ಕಶ ಶಬ್ಧದಿಂದ ಮಕ್ಕಳಿಗೆ ಓದಲು ಆಗ್ತಿಲ್ಲ.ಹಾನಿಕಾರಕ ಸ್ಫೋಟಕಗಳಿಂದ ಹಲವು ಮನೆಗಳು ಬಿರುಕು ಬಿಡೋದಿರಲಿ ಕುಸಿದು ಬಿದ್ದಿವೆ. ಪ್ರತಿದಿನ ಇಲ್ಲಿನ ಜನ ಆತಂಕದೊಂದಿಗೆ ದಿನ ಕಳೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಮೈನಿಂಗ್ ಅಧಿಕಾರಿಗಳು ಏನ್ಮಾಡ್ತಿದ್ದಾರೆ ಎಂಬುವುದು ಇಲ್ಲಿನ ಜನರ ಪ್ರಶ್ನೆಯಾಗಿದೆ. Sign in to your account
Username or Email Address


Password

 Remember Me


