ಚಿತ್ರದುರ್ಗ: ಜಿಲ್ಲೆಯ ಹೊಳಲ್ಕರೆ ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.ಆಹಾರ, ನೀರು ಹುಡುಕುತ್ತಾ ನಾಡಿನತ್ತ ಬಂದ ಕರಡಿ ರೈತರು ಗದ್ದೆಗೆ ಹಾಕಿದ ತಂತಿಗೆ ಸಿಲುಕಿತ್ತು. ಗ್ರಾಮದ ವೆಂಕಟೇಶ್ ಎಂಬವರ ಗದ್ದೆಯಲ್ಲಿ ಕರಡಿ ತಂತಿ ಬೇಲಿಗೆ ಸಿಕ್ಕಿ ಹಾಕಿಕೊಂಡಿತ್ತು. ಆರಂಭದಲ್ಲಿ ಹತ್ತಿರ ಹೋಗುವುದಕ್ಕೂ ಹೆದರುತ್ತಿದ್ದ ಗ್ರಾಮಸ್ಥರು ಬಳಿಕ ಕರಡಿ ಸಂಪೂರ್ಣವಾಗಿ ನಿತ್ರಾಣಗೊಂಡಿರೋದನ್ನ ಖಚಿತಪಡಿಸಿಕೊಂಡು ತಂತಿಯಿಂದ ಬಿಡಿಸಿದ್ದಾರೆ.ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ನಿತ್ರಾಣಗೊಂಡಿದ್ದ ಕರಡಿಯನ್ನು ಸ್ಥಳಾಂತರಗೊಳಿಸಿದರು. ಗ್ರಾಮದ ಹತ್ತಿರ ಮೂರು ಕರಡಿಗಳು ಇರೋದನ್ನು ಕಂಡಿರುವ ಗ್ರಾಮಸ್ಥರು ಸದ್ಯ ಒಂದು ಕರಡಿ ಸಿಕ್ಕಿದ್ದು, ಮತ್ತೆರೆಡು ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಕರಡಿಯನ್ನ ದಾವಣೆಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ. Sign in to your account
Username or Email Address


Password

 Remember Me


