ರಾಯಚೂರು: ದೇಶದ ಏಕೈಕ ಬಂಗಾರ ಉತ್ಪಾದಿಸುವ ಚಿನ್ನದಗಣಿ ಕಂಪನಿ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಅಧಿಕಾರಿಯೇ ಅದಿರು ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಭೂತಜ್ಞ ಗಣೇಶ್ ಒಂದು ಕೆ.ಜಿ. 900 ಗ್ರಾಂ ಚಿನ್ನದ ಅದಿರನ್ನ ಹೊರಗಡೆ ಸಾಗಿಸುತ್ತಿದ್ದಾಗ ಸೆಕ್ಯೂರಿಟಿ ಗಾರ್ಡ್‍ಗೆ ಸಿಕ್ಕಿಬಿದ್ದಿದ್ದಾನೆ. ಗಣಿಗಾರಿಕೆಯಲ್ಲಿ ತೆಗೆದ ಅದಿರನ್ನ ಪ್ರಯೋಗಾಲಯಕ್ಕೆ ಅಥವಾ ಮಿಲ್‍ಗೆ ಕಳುಹಿಸಿದೆ ಸ್ವತಃ ತಾನೇ ತೆಗೆದುಕೊಂಡು ಹೊರ ಹೋಗುತ್ತಿದ್ದಾಗ ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.ಹಟ್ಟಿ ಚಿನ್ನದಗಣಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಸಂಗೂರಮಠ್ ಅವರು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಗಣೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.  Sign in to your account
Username or Email Address


Password

 Remember Me


