ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್‍ಗೆ ಸಂಬಂಧಿಸಿದಂತೆ ಕೊನೆಗೂ ಅಭಿನಯ ಚಕ್ರವರ್ತಿ ಮೌನ ಮುರಿದಿದ್ದಾರೆ.ಹೆಬ್ಬುಲಿ ಚಿತ್ರದ ಪ್ರಚಾರ ಸಂಬಂಧ ಇಂದು ಸುದೀಪ್ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ದರ್ಶನ್ ಟ್ವೀಟ್‍ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದಕ್ಕೆ, ‘ಗೀವ್ ರಸ್ಪೆಕ್ಟ್ ಅಂಡ್ ಟೇಕ್ ರೆಸ್ಪೆಕ್ಟ್’ ಎಂದು ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: 20 ದಿನದ ಹಿಂದೆ ಸುದೀಪ್- ದರ್ಶನ್ ಪರಸ್ಪರ ವಿಶ್ ಮಾಡ್ಕೊಂಡಿದ್ರು!ನನಗೆ ಮರ್ಯಾದೆ ಕೊಟ್ಟರೆ ನಾನು ಮರ್ಯಾದೆ ನೀಡುತ್ತೇನೆ ಎಂದು ಕೇವಲ 5 ಸೆಕೆಂಡ್‍ನಲ್ಲಿ ಹೇಳಿ ಚಿತ್ರದ ಪ್ರಚಾರಕ್ಕಾಗಿ ಬೆಳಗಾವಿಗೆ ತೆರಳಿದರು.ಸೋಮವಾರ ಸುದೀಪ್ ತುಮಕೂರಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇವತ್ತು ಒಂದು ವಾಕ್ಯವನ್ನು ಹೇಳಿದ್ದು, ಮುಂದೆ ಈ ವಿಚಾರದ ಬಗ್ಗೆ ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.ದುಃಖ ತಂದಿದೆ: ತುಮಕೂರಿನ ಅಭಿಮಾನಿ ಶಿವು ಮೃತಪಟ್ಟಿರುವುದು ನನಗೆ ದುಃಖ ತಂದಿದೆ. ಎಲ್ಲರಂತೆ ನನಗೂ ಅಭಿಮಾನಿಗಳು ಅಂದ್ರೆ ಬಹಳ ಇಷ್ಟ. ಆದರೆ ಆತನ ಸಾವು ನನಗೆ ನೋವು ತಂದಿದೆ. ನನ್ನ ಜೊತೆ ಹಲವು ದಿನಗಳಿಂದಲೂ ಒಟನಾಟ ಇಟ್ಟುಕೊಂಡಿದ್ದ. ನಾನು ಅಲ್ಲೆ ಇದ್ದರೆ ಅವನನ್ನು ಖಂಡಿತಾ ನೋಡಲು ಹೋಗುತ್ತಿದ್ದೆ ಎಂದು ಹೇಳಿದರು.ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?ಇದನ್ನೂ ಓದಿ:  ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್ಇದನ್ನೂ ಓದಿ: ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್Sign in to your account
Username or Email Address


Password

 Remember Me


