ಗದಗ: ನಗರದಲ್ಲಿ ನಡೆದ ಜಾನಪದ ಜಾತ್ರೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿದೆ. ಗ್ರಾಮೀಣ ಸೊಗಡಿನ ಕಲಾಲೋಕ ನಗರದ ಜನರನ್ನು ವೇದಿಕೆಯತ್ತ ಬರಮಾಡಿಕೊಂಡಿತ್ತು. ನಾಡಿನ ವಿವಿಧ ಮೂಲೆಗಳಿಂದ 400 ಕ್ಕೂ ಹೆಚ್ಚು ಕಲಾವಿದ್ರು, 45 ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳುವ ಮೂಲಕ ಜಾತ್ರೆಯ ಮೆರಗು ಹೆಚ್ಚಿಸಿದವು.ಗುರ್ಜಿ ನೃತ್ಯ, ಕೋಲಾಟ, ಬುಡಕಟ್ಟು ಜನಾಂಗದ ನೃತ್ಯ, ಡೊಳ್ಳುಪದ, ಲಂಬಾಣಿ ನೃತ್ಯ, ಡಮಾಮಿ ಹೀಗೆ ಹತ್ತು ಹಲವು ಜನಪದ ಕಲೆ ರಸದೌತಣವನ್ನು ಕಲಾರಸಿಕರು ಸವಿದರು. ಜಾನಪದ ಕಲೆಯನ್ನು ಜೀವಂತವಾಗಿರಿಸಲು ಸರ್ಕಾರ ಹಾಗೂ ಕನ್ನಡ ಮತ್ತು ಇಲಾಖೆಯ ಪ್ರಯತ್ನಕ್ಕೆ ನಗರದ ಭೀಷ್ಮಕೆರೆಯ ಒಡಲು ಸಾಕ್ಷಿಯಾಯಿತು. ನಾಡಿನ ಜಾನಪದ ವಿದ್ವಾಂಸರು ಒಂದೆಡೆ ಸೇರಿ ಯೋಜನಾಬದ್ಧವಾಗಿ ಜಾನಪದ ಜಾತ್ರೆಯನ್ನು ಆಯೋಜಿಸಿದ್ದು ವಿಶೇಷವಾಗಿತ್ತು.ನಾವುಗಳೆಲ್ಲ ಇಂದು ಮೋಜು, ಮಸ್ತಿಗಾಗಿ ಜಾತ್ರೆಗಳನ್ನು ಮಾಡ್ತಿದ್ದೇವೆ. ಆದ್ರೆ ಇಲ್ಲಿ ನಡೆದ ಜಾತ್ರೆ ಸಮಾಜಕ್ಕೊಂದು ವಿಶೇಷ ಸಂದೇಶ ನೀಡುವುದರ ಮೂಲಕ ನಮ್ಮ ತನದ ಸಂಸ್ಕೃತಿಗೆ ನೀರೆರೆದು ಪೋಷಿಸಲು ಅನುಕೂಲ ಕಲ್ಪಿಸಿತು. ನಗರ ಪ್ರದೇಶ ಜನರಿಗೆ ಗ್ರಾಮೀಣ ಮಹತ್ವ ತಿಳಿಸಲು ಈ ಜಾತ್ರೆ ಮಾಡಲಾಗುತ್ತಿದೆ ಎಂದು ಜಾನಪದ ಜಾತ್ರೆಯ ನಿರ್ದೇಶಕ ಡಾ.ಬಾನಂದೂರು ಕೆಂಪಯ್ಯ ಹೇಳಿದರು.ತಾಯಿ ಮೂಲ ಸಂಸ್ಕೃತಿಯಿಂದ ಬೆಳೆದು ಬಂದು ನಮ್ಮ ಅಪರೂಪದ ಕಲೆಗಳು ಇಂದು ಆಧುನಿಕತೆ ಭರಾಟೆಗೆ ಸಿಕ್ಕು ನರಳುತ್ತಿವೆ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಳಿವಿನಂಚಿನಲ್ಲಿರೋ ಕಲೆಗಳಿಗೆ ಜೀವ ತುಂಬುವ ಮೂಲಕ ಮತ್ತೆ ನೆಲಮೂಲ ಸಂಸ್ಕೃತಿ ಪರಿಚಯವನ್ನು ಯುವಪೀಳಿಗೆಗೆ ತಲುಪಿಸೋ ಕೆಲಸವನ್ನು ಜಾನಪದ ಜಾತ್ರೆ ಮೂಲಕ ಮಾಡ್ತಿರೋದು ವಿಶೇಷವಾಗಿದೆ.ರಾಜ್ಯ ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಗದಗ ತಾ.ಪಂ.ಅಧ್ಯಕ್ಷ ರವಿ ಮನೋಹರ ಇನಾಮತಿ, ಕನ್ನಡ ಮತ್ತಿ ಸಂಸ್ಕೃತಿ ಇಲಾಖೆ ಜಂಟಿ ನಿರ್ಧೇಶಕ ಅಶೋಕ ಚಲವಾದಿ, ಜಾನಪದ ತಜ್ಞ ಹಾಗೂ ಜಾನಪದ ಜಾತ್ರೆ ನಿರ್ದೇಶಕ ಬಾನಂದೂರ ಕೆಂಪಯ್ಯ ಕನ್ನಡ ಮತ್ತು ಸಂಸ್ಕೃತ ಪ್ರಭಾರಿ ಅಧಿಕಾರಿ ಶರಣು ಗೊಗೇರಿ ಹಾಗೂ ಅನೇಕ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಕಲಾವಿದರು, ಕಲಾ ಪ್ರೇಮಿಗಳು ಉಪಸ್ಥಿತರಿದ್ದರು.  Sign in to your account
Username or Email Address


Password

 Remember Me


