ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಉದ್ಭವವಾಗಿದೆ. ಮೇವು ಇಲ್ಲದೆ ದನ-ಕರುಗಳು ಸಾಯ್ತಿವೆ. ಇಂತಹ ದನ ಕರುಗಳಿಗೆ ಬರದಲ್ಲೂ ಆಹಾರ ಸಿಗೋ ಸಂಜೀವಿನಿಯೊಂದು ಇದೆ. ಈ ಸಂಜೀವಿನ ದನ ಕರುಗಳ ಮೇವಿನ ಕೊರತೆ ನೀಗಿಸುತ್ತದೆ.ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬರಗಾಲ. ಅದ್ರಲ್ಲೂ ಈ ವರ್ಷ ಕಂಡು ಕೇಳರಿಯದ ಬರ. ಕುಡಿಯಲು ನೀರಿಲ್ಲ, ದನ-ಕರುಗಳಿಗೆ ಮೇವಿಲ್ಲ. ಅಷ್ಟೆಲ್ಲಾ ಸಂಕಷ್ಟಗಳ ಮಧ್ಯೆ ಜಾನುವಾರು ಮೇವಿಗೆ ಜಲಸಸ್ಯ ಅಜೋಲಾ ಸಂಜೀವಿನಿ ಆಗಿದೆ. ಈ ಸಸ್ಯ ಬೆಳೆಸಲು ಹೆಚ್ಚು ನೀರಿನ ಅಗತ್ಯವಿಲ್ಲ. ಹಣದ ವೆಚ್ಚವೂ ಕಡಿಮೆ. ಸಣ್ಣದೊಂದು ತೊಟ್ಟಿ ಅಥವಾ ಗುಂಡಿಗಳಲ್ಲಿ ಸುಲಭವಾಗಿ ಇದನ್ನ ಬೆಳೆಸಬಹುದು.ಈ ಅಜೋಲಾ ಸಸ್ಯದಲ್ಲಿ ಜಾನುವಾರಿಗೆ ಪೌಷ್ಠಿಕಾಂಶ ಸಿಗಲಿದ್ದು, ಹಾಲು ಉತ್ಪಾದನೆಗೆ ಬೇಕಾದ ಸಾರಜನಕ, ಖನಿಜ ಸೇರಿದಂತೆ 15ಕ್ಕೂ ಹೆಚ್ಚು ಪೋಷಕಾಂಶಗಳು ಯಥೇಚ್ಚವಾಗಿದೆ. ಒಂದು ಕೆಜಿ ಅಜೋಲವನ್ನ ತೊಟ್ಟಿಗೆ ಹಾಕಿದ್ರೆ, ಒಂದು ವಾರದಲ್ಲಿ 10 ಕೆಜಿಯಷ್ಟು ಅಜೋಲ ಬೆಳೆಯುತ್ತೆ. ಹಸುಗಳಿಗೆ ಅಜೋಲ ನೀಡಿದ್ರೆ ಶೇಕಡ 10 ರಿಂದ 15 ರಷ್ಟು ಹಾಲಿನ ಇಳುವರಿಯೂ ಹೆಚ್ಚಾಗುತ್ತದೆಯಂತೆ.ಅಜೋಲ ಸಸ್ಯ ಕೇವಲ ಜಾನುವಾರುಗಳಿಗಷ್ಟೇ ಸೀಮಿತವಾಗದೆ ಹಂದಿ, ಕುರಿ, ಮೀನು, ಕೋಳಿ ಸಾಕಾಣೆಗೂ ಬಳಕೆಯಾಗುತ್ತೆ. ಬರಗಾಲದಿಂದ ಕಂಗೆಟ್ಟ ರೈತಾಪಿ ವರ್ಗ ಮೇವು ಕೊರತೆ ನೀಗಿಸಲು ಅಜೋಲಾ ವಿಧಾನವನ್ನು ಅನುರಿಸಿದ್ರೆ ಮೇವಿನ ಕೊರತೆ ನೀಗಿಸಬಹುದಾಗಿದೆ. Sign in to your account
Username or Email Address


Password

 Remember Me


