ಹಾವೇರಿ: ಕೊಪ್ಪಳದ ಅಪಘಾತ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.ಬೈಕ್‍ನಲ್ಲಿ ಬಸ್ ಓವರ್ ಟೇಕ್ ಮಾಡುತ್ತಿದ್ದ ವೇಳೆ ತಂದೆಯ ಹಿಂದೆ ಕುಳಿತ್ತಿದ್ದ ಮಗ ಭಯಗೊಂಡು ಜಿಗಿದು ಬಸ್‍ನ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. 12 ವರ್ಷದ ಬಾಲಕ ಆನಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ರೂ ಜನ ಸಹಾಯಕ್ಕೆ ಹೋಗದೆ ಪೊಲೀಸ್ ಸಿಬ್ಬಂದಿ ಬರಲಿ ಅಂತಾ ನೋಡ್ತಿದ್ರು. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬಾಲಕ ಆನಂದ ಮೃತಪಟ್ಟಿದ್ದಾನೆ.ತಂದೆ ಮಂಜುನಾಥರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ಸವಣೂರು ಪಟ್ಟಣದಿಂದ ತಮ್ಮ ಗ್ರಾಮ ಮೆಳಾಗಟ್ಟಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.Sign in to your account
Username or Email Address


Password

 Remember Me


