ಗದಗ: ಮನಸ್ಸಿದ್ದರೆ ಮಾರ್ಗ ಅನ್ನೋ ಮಾತನ್ನ ಹಲವರು ತೋರಿಸಿದ್ದಾರೆ. ಅವರ ಸಾಲಿಗೆ ಗದಗದ ಸೊರಟೂರ ಗ್ರಾಮದ ವ್ಯಕ್ತಿ ಕೂಡ ಸೇರ್ಪಡೆಯಾಗಿದ್ದಾರೆ. ಎರಡೂ ಕೈಗಳು ವಿದ್ಯುತ್ ಅವಘಡದಲ್ಲಿ ಸುಟ್ಟುಹೋಗಿದ್ದರೂ ಕೈ ಇದ್ದವರನ್ನೂ ಮೀರಿಸುವಂತೆ ಬದುಕು ಸಾಗಿಸುತ್ತಿದ್ದಾರೆ.ಗದಗ ತಾಲೂಕಿನ ಸೊರಟೂರ ಗ್ರಾಮದ ಗುರುಪಾದಪ್ಪ ದೊಡ್ಡಣ್ಣನವರ್‍ಗೆ 2011ರಲ್ಲಿ ಜಮೀನಲ್ಲಿ ಬೋರ್‍ವೆಲ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ಅವಘಡವಾಗಿತ್ತು. ಇದರಿಂದ ಎರಡೂ ಕೈಗಳನ್ನು ಕತ್ತರಿಸಿ ಜೀವ ಉಳಿಸಬೇಕಾದ ಅನಿವಾರ್ಯತೆ ವೈದ್ಯರಿಗೆ ಎದುರಾಗಿತ್ತು. ವಿಧಿ ಇಲ್ಲದೇ ಬಲಗೈಯ್ಯನ್ನು ಮೊಣಕೈವರೆಗೂ ಎಡಗೈಯ್ಯನ್ನು ಭುಜದವರೆಗೂ ಕತ್ತರಿಸಲಾಗಿದೆ. ಆದ್ರೂ ದೊಡ್ಡಣ್ಣನವರ್ ಕೈ ಇಲ್ಲ ಅಂತಾ ಸುಮ್ಮನೆ ಕೂತಿಲ್ಲ. ಬದಲಾಗಿ ಟ್ರಾಕ್ಟರ್ ಓಡಿಸೋದನ್ನ ಕಲಿತು ಬಳಿಕ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಇದೇ ಟ್ರಾಕ್ಟರ್‍ನಿಂದ ಇಂದು ದುಡಿದು ಹೆಂಡತಿ ಹಾಗೂ ಮೂವರು ಮಕ್ಕಳನ್ನು ಸಾಕುತ್ತಿದ್ದಾರೆ.ಮೊಬೈಲ್ ಒಂದನ್ನು ಆಪ್‍ರೇಟ್ ಮಾಡೋದು ಬಿಟ್ರೆ ಇವರಿಗೆ ಉಳಿದ ಕೆಲಸ ಕಷ್ಟ. ಹೀಗಾಗಿ ಹೆಂಡತಿಯೇ ಇವರಿಗೆ ಆಧಾರವಾಗಿದ್ದಾರೆ. ಕೈ ಇಲ್ಲದಿದ್ದರೂ ಛಲದಂಕ ಮಲ್ಲನಂತೆ ಬಾಳುವ ಗುರುಪಾದಪ್ಪ ನಿಜಕ್ಕೂ ಇತರರಿಗೆ ಸ್ಫೂರ್ತಿ.Sign in to your account
Username or Email Address


Password

 Remember Me


