ಧಾರವಾಡ: ಕೇವಲ 5 ಸಾವಿರ ಸಾಲ ವಾಪಸ್ ಮಾಡಲಿಲ್ಲ ಎಂದು ತನ್ನ ಗೆಳೆಯನಿಗೆ ಇನ್ನಿಬ್ಬರು ಗೆಳೆಯರು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ಮಧ್ಯರಾತ್ರಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.ಬಸವರಾಜ್ ಹೊಸಕೇರಿ (28) ತನ್ನ ಗೆಳೆಯರಿಂದ ಕೊಲೆಯಾದ ವ್ಯಕ್ತಿ. ಅಲ್ತಾಫ್ ನದಾಫ್ ಮತ್ತು ಶಂಕರಪ್ಪ ಇಬ್ಬರೂ ಸೇರಿ ಬಸವರಾಜ್‍ನ ಕೊಲೆ ಮಾಡಿರುವ ಆರೋಪಿಗಳು. ಬುಧವಾರ ರಾತ್ರಿ ಬಸವರಾಜ್ ಹಾಗೂ ಅಲ್ತಾಫ್ ನದಾಫ್ ಮತ್ತು ಶಂಕ್ರಪ್ಪ ಸೇರಿ ಮದ್ಯವನ್ನ ಕುಡಿದಿದ್ದಾರೆ.ಬಾರ್‍ವೊಂದರಲ್ಲಿ ಮದ್ಯ ಕುಡಿದು ಬಸವರಾಜನ ಮನೆಗೆ ಬಂದು ಅಲ್ಲಿ ಕುಡಿದಿದ್ದಾರೆ. ಈ ವೇಳೆ ಅಲ್ತಾಫ್, ಗೆಳೆಯ ಬಸವರಾಜನಿಗೆ ತನ್ನ 5 ಸಾವಿರ ರೂಪಾಯಿ ಸಾಲ ವಾಪಸ್ ನೀಡಲು ಒತ್ತಾಯಿಸಿದ್ದಾನೆ. ಹಣದ ವಿಚಾರವಾಗಿ ಅಲ್ತಾಫ್ ಮತ್ತು ಬಸವರಾಜನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗುತ್ತಿದ್ದಂತೆಯೇ ಶಂಕ್ರಪ್ಪ ಬಸವರಾಜನ ಕೈಗಳನ್ನ ಹಿಡಿದುಕೊಂಡಿದ್ದಾನೆ. ಈ ವೇಳೆ ಅಲ್ತಾಫ್ ದೊಣ್ಣೆಯಿಂದ ಹೊಡೆದು ಬಸವರಾಜನನ್ನು ಕೊಲೆ ಮಾಡಿದ್ದಾನೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಅಲ್ತಾಫ್‍ ಮತ್ತು ಶಂಕ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


