ಮೈಸೂರು: ಉದ್ಯಮಿ ಗೋವಿಂದ ಪೂಜಾರಿಗೆ (Govind Babu Poojary) ಐದು ಕೋಟಿ ವಂಚನೆ ಮಾಡಿದ ಕೇಸ್‍ನಲ್ಲಿ ಎ-3 ಹಾಲಶ್ರೀ (Halashree) ಬಂಧನವಾಗಿದೆ. ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಾಶ್ರೀ ಯತ್ನಿಸಿದ್ರು ಎನ್ನಲಾಗ್ತಿದೆ.ಓರ್ವ ರಾಜಕಾರಣಿ ಮೂಲಕ ರಾಜಿ ಪಂಚಾಯ್ತಿ ಯತ್ನ ನಡೆಸಲು ಮುಂದಾಗಿದ್ರು ಎನ್ನಲಾಗ್ತಿದೆ. ಸೆಪ್ಟೆಂಬರ್ 8ರಂದು ವಂಚನೆ ಕೇಸು ದಾಖಲಾಗಿದೆ. ಸೆಪ್ಟೆಂಬರ್ ಹತ್ತರಂದು ಸ್ವಾಮೀಜಿ ಕೂಡ್ಲಿಗಿ ಗ್ರಾಮ ಒಂದರ ಧಾರ್ಮಿಕ ಕಾರ್ಯಕ್ರಮ ಮುಗಿಸಿ ನೇರವಾಗಿ ಮೈಸೂರಿಗೆ ಹೋಗಿದ್ರು. ಸ್ನೇಹಿತರ ಜೊತೆಯಲ್ಲಿ ಇದ್ದ ಸ್ವಾಮೀಜಿ ಮೈಸೂರಿನ (Mysuru) ಪ್ರಭಾವಿ ರಾಜಕಾರಣಿಯನ್ನು ಭೇಟಿ ಮಾಡಿ ಪ್ರಕರಣದಲ್ಲಿ ತಮ್ಮ ತಪ್ಪು ಇಲ್ಲಾ ಎನ್ನುವ ವಿಚಾರ ತಿಳಿಸಲು ಯತ್ನಿಸಿದ್ರಂತೆ.ಆ ಪ್ರಭಾವಿ ರಾಜಕಾರಣಿಯನ್ನು ಭೇಟಿ ಮಾಡುವ ಮೊದಲೇ ಚೈತ್ರಾ & ಗ್ಯಾಂಗ್ (Chaitra Kundapura) ಬಂಧನವಾಗಿದೆ. ಈ ಸುದ್ದಿ ತಿಳಿದ ಕೂಡಲೇ ಮೈಸೂರಿನಲ್ಲಿ ತಮ್ಮ ಕಾರ್ ಚಾಲಕನನ್ನು ಬಿಟ್ಟು ಅಲ್ಲಿಂದ ಮತ್ತೆ ಪರಾರಿಯಾಗುತ್ತಾರೆ. ಒಟ್ಟಿನಲ್ಲಿ ಸದ್ಯ ಕೋಟಿ ಕೋಟಿ ವಂಚನೆ ಕೇಸ್‍ನಲ್ಲಿ ಅಭಿನವ ಹಾಲಶ್ರೀ ತಗ್ಲಾಕಿಕೊಂಡಿದ್ದಾರೆ. ಉದ್ಯಮಿ ಗೋವಿಂದ ಪೂಜಾರಿಯಿಂದ 1.5 ಕೊಟಿ ಹಣ ಪಡೆದಿದ್ದ ಹಾಲಶ್ರೀ ಏನು ಮಾಡಿದ್ರು ಅನ್ನೋದೇ ಕುತೂಹಲ ಮೂಡಿದೆ. ಒಂದು ಕಡೆ ಸ್ವಾಮೀಜಿ ಬಂದ ಹಣದಿಂದ ಸಾಕಷ್ಟು ಆಸ್ತಿ ಖರೀದಿ ಮಾಡಿದ್ರು ಎನ್ನಲಾಗ್ತಿದೆ. ಇದನ್ನೂ ಓದಿ: ಮಧ್ಯರಾತ್ರಿವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ಹಾಲಶ್ರೀ ವಿಚಾರಣೆ- ಇಂದು ಕೋರ್ಟ್ ಮುಂದೆ ಹಾಜರುಚಂದ್ರಪ್ಪ ಎಂಬವರ ಪತ್ನಿ ಹೆಸರಲ್ಲಿ ಇರುವ ಪೆಟ್ರೋಲ್ ಬಂಕ್‍ಗೆ ಸುಮಾರು 40 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಚಂದ್ರಪ್ಪ ಅನ್ನೋರು ಪೆಟ್ರೋಲ್ ಬಂಕ್ ಆರಂಭಕ್ಕೆ ಅನುಮತಿ ಇದ್ದರೂ ಅವರು ಬಳಿ ಹಣದ ಕೊರತೆ ಉಂಟಾಗಿದೆ. ಹೀಗಾಗಿ ಇದರ ಲಾಭ ಪಡೆದ ಹಾಲಶ್ರೀ, ಚಂದ್ರಪ್ಪಗೆ ಸುಮಾರು 40ಲಕ್ಷ ಹಣ ನೀಡಿ, ಲೀಜ್ ರೀತಿಯಲ್ಲಿ ಪೆಟ್ರೋಲ್ ಬಂಕ್ ನಡೆಸುತಿದ್ದಾರಂತೆ. ಆದ್ರೆ ಉಳಿದ ಹಣ ಯಾವುದಕ್ಕೆ ವಿನಿಯೋಗ ಆಗಿದೆ..? ಯಾರಿಗಾದ್ರೂ ಕೊಟ್ಟಿದ್ದಾರಾ ಅಂತ ವಿಚಾರಣೆಯಿಂದ ತಿಳಿದು ಬರಬೇಕಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


