ಬೆಂಗಳೂರು: ಶಿಕ್ಷಣವು ವ್ಯಕ್ತಿಯ ದೇಶ ಮತ್ತು ವಿಶ್ವದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಶಿಕ್ಷಣವು ಸಮಾಜಕ್ಕೆ, ದೇಶ ಮತ್ತು ಜಗತ್ತಿಗೆ ಸರಿಯಾದ ದಿಕ್ಕನ್ನು ನೀಡುವ ಏಕೈಕ ಸಾಧನವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gelhot) ಹೇಳಿದರು.ನಗರದ ಗುಡ್ ಷೆಫರ್ಡ್ ಶಾಲೆಯಲ್ಲಿ ಭಾರತದ ಆಂಗ್ಲೋ ಇಂಡಿಯನ್ ಶಾಲೆಗಳ ಮುಖ್ಯಸ್ಥರ ಸಂಘ(ಎಹೆಚ್‍ಎಐಎಸ್)ವು ಆಯೋಜಿಸಿದ್ದ ಶತಮಾನೋತ್ಸವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ ಮಾಡಲು ದೇಶದ ಪ್ರಧಾನ ಮಂತ್ರಿ ಬದ್ಧರಾಗಿದ್ದಾರೆ. ಆಧುನಿಕ ಜ್ಞಾನವನ್ನು ಮಾನವ ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಎಲ್ಲರಿಗೂ ಮೌಲ್ಯಯುತ ಶಿಕ್ಷಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಸಿದ್ಧಪಡಿಸಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತ ಮತ್ತು ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡಲಿದೆ ಎಂದರು.ಈ ಶಿಕ್ಷಣ ನೀತಿಯ ಉದ್ದೇಶವು ಎಲ್ಲರಿಗೂ ಉನ್ನತ ಶಿಕ್ಷಣವನ್ನು ಒದಗಿಸುವುದು, ಮಾತೃಭಾಷೆಯಲ್ಲಿ ಅಧ್ಯಯನದ ಜೊತೆಗೆ ನೆಚ್ಚಿನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣದಿಂದ ಶಿಕ್ಷಣದ ಹರಡುವಿಕೆ ವೇಗವಾಗಿ ಹೆಚ್ಚಾಗುತ್ತದೆ ಎಂದ ಅವರು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವು ಬಹಳ ಮುಖ್ಯವಾಗಿದೆ. ತರಗತಿಗಳಲ್ಲಿ ಡಿಜಿಟಲ್ ಕಲಿಕಾ ಪರಿಕರಗಳ ಪರಿಣಾಮಕಾರಿ ಬಳಕೆಗೆ ಹೆಚ್ಚಿನ ಅವಶ್ಯಕತೆಯಿದೆ ಎಂದು ತಿಳಿಸಿದರು.ಗುಣಮಟ್ಟದ ತಾಂತ್ರಿಕ ಶಿಕ್ಷಣವು ಖಂಡಿತವಾಗಿಯೂ ನುರಿತ ಮತ್ತು ತರಬೇತಿ ಪಡೆದ ಯುವಕರನ್ನು ಸೃಷ್ಟಿಸುತ್ತದೆ ಮತ್ತು ಅವರು ಉತ್ತಮ ಉದ್ಯೋಗವನ್ನು ಹೊಂದುವುದರ ಜೊತೆಗೆ ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಲಿ: ಸಚಿವ ನಿರಾಣಿ ಒತ್ತಾಯ1991 ರಲ್ಲಿ ನಾನು ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವನಾಗಿದ್ದಾಗ, ಸಾಕ್ಷರತಾ ಜಾಗೃತಿಗಾಗಿ ಅಲೋಟ್ ವಿಧಾನಸಭಾ ಕ್ಷೇತ್ರದಲ್ಲಿ 11 ದಿನಗಳ ಕಾಲ ಪಾದಯಾತ್ರೆಗೆ ಹೋಗಿದ್ದೆ ಮತ್ತು ಹಳ್ಳಿಗಳಲ್ಲಿ ರಾತ್ರಿ ವಿಶ್ರಾಂತಿ ಪಡೆದ ನಂತರ ಗ್ರಾಮ ಸಭೆಗಳನ್ನು ಆಯೋಜಿಸುತ್ತಿದ್ದೆ. ಆ ಸಭೆಗಳಲ್ಲಿ ಶಿಕ್ಷಣದ ಮಹತ್ವದ ಅರಿವು ಮೂಡಿಸುವುದರ ಜೊತೆಗೆ ಆ ಊರಿನ ಮುಖಂಡರಲ್ಲಿ ಚರ್ಚಿಸಿ ಒಂದು ಶಾಲೆಯನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರಪಿಸಿ, ಸಾಕ್ಷರತೆ ಜಾಗೃತಿ ಮೂಡಿಸುತ್ತಿದ್ದೆವು ಎಂದು ಹಿಂದಿನ ದಿನಗಳನ್ನು ಸ್ಮರಿಸಿದರು.ನಮ್ಮ ದೇಶದಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ದೊಡ್ಡ ಸಮಸ್ಯೆ ಇದೆ, ಅದನ್ನು ತೆಗೆದು ಹಾಕಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ನನ್ನ ಅಭಿಪ್ರಾಯದಲ್ಲಿ, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲು, ಶಾಲೆಗಳನ್ನು ದತ್ತು ತೆಗೆದುಕೊಳ್ಳಲು, ಶಿಕ್ಷಣಕ್ಕಾಗಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.ಮುಂದಿನ 25 ವರ್ಷಗಳ ಪ್ರಯಾಣವು ನವ ಭಾರತ ನಿರ್ಮಾಣಕ್ಕೆ ಸುವರ್ಣಯುಗವಾಗಿದೆ. ಈ ಅಮೃತಕಲ್‍ನಲ್ಲಿ ನಮ್ಮ ಸಂಕಲ್ಪಗಳ ಸಾಧನೆಯು ನಮ್ಮನ್ನು ಸ್ವಾತಂತ್ರ್ಯದ 100 ವರ್ಷಗಳವರೆಗೆ ಕೊಂಡೊಯ್ಯುತ್ತದೆ ಎಂದ ಅವರು ಆಂಗ್ಲೋ-ಇಂಡಿಯನ್ ಶಾಲೆಯ ಮುಖ್ಯಸ್ಥರ ಮಂಥನದಿಂದ ಹೊರಬರುವ ಅಮೃತವು ಭವಿಷ್ಯದ ಸುವರ್ಣ ಭಾರತವನ್ನು ರಚಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಎಹೆಚ್‍ಎಐಎಸ್ ಅಧ್ಯಕ್ಷ ಟೆರೆನ್ಸ್ ಐರ್ಲೆಂಡ್, ರೆವ್.ವಿನ್ಸೆಂಟ್ ವಿನೋದ್ ಕುಮಾರ್, ಎಹೆಚ್‍ಎಐಎಸ್ ಕಾರ್ಯದರ್ಶಿ ಡೇವಿಡ್ ಹಿಲ್ಟನ್, ಎಹೆಚ್‍ಎಐಎಸ್ ಕರ್ನಾಟಕದ ಅಧ್ಯಕ್ಷ ಕೆವಿನ್ ಡಿ ಪೋಪ್, ಸಿಸ್ಟರ್ ಲಿಸ್ಸಿ ಚಾಕೋ, ಸಿಸ್ಟರ್ ಮಾರ್ಗೇರೇಟ್ ಮೇರಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
Sign in to your account
Username or Email Address


Password

 Remember Me


