ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಭತ್ತದ ಗದ್ದೆಯೊಂದರಲ್ಲಿ ಕೃಷಿ ಕೂಲಿ ಮಹಿಳಾ ಕಾರ್ಮಿಕರು (Women) ಕೇಕ್ (Cake) ಕತ್ತರಿಸಿ ಹೊಸವರ್ಷವನ್ನು (New Year) ಸಂಭ್ರಮದಿಂದ ಸ್ವಾಗತಿಸಿದ್ದಾರೆ.ಹೊಸವರ್ಷದ ಹಿನ್ನೆಲೆಯಲ್ಲಿ ಗದ್ದೆ ಮಾಲೀಕ ಕೇಕ್ ತರಿಸಿದ್ದ. ಈ ಎರಡು ಕೇಕ್ ಕತ್ತರಿಸಿ ಭತ್ತ ನಾಟಿ ಮಾಡಿ ದಣಿವಾಗಿದ್ದ ಮಹಿಳೆಯರು ಸಂಭ್ರಮಿಸಿದ್ದಾರೆ. ಭತ್ತ ನಾಟಿ ಮಾಡುವ ಕಾಯಕಕ್ಕೆ ಬಂದಿದ್ದ 30ಕ್ಕೂ ಹೆಚ್ಚು ಮಹಿಳೆಯರು ಹೊಸ ವರ್ಷದ ಮೊದಲ ದಿನ ಭತ್ತ ನಾಟಿ ಕಾರ್ಯ ಮುಗಿದ ಮೇಲೆ ಹೊಸ ವರ್ಷಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿಗ್ರಾಮೀಣ ಭಾಗದ ರೈತಾಪಿ ಜನ ಯುಗಾದಿಯಂದೆ ಹೊಸವರ್ಷವನ್ನ ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರಾದರೂ ಕ್ಯಾಲೆಂಡರ್ ಹೊಸ ವರ್ಷವನ್ನೂ ಕೇಕ್ ಕತ್ತರಿಸುವ ಮೂಲಕ ಕೃಷಿ ಕೂಲಿ ಕಾರ್ಮಿಕರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು
Sign in to your account
Username or Email Address


Password

 Remember Me


